alex Certify ಮದುವೆಯಾದ ಮರುದಿನವೇ ಬಯಲಾಯ್ತು ಯುವಕನ ಅಸಲಿಯತ್ತು, ಪರಾರಿಯಾದ ಪತಿಗಾಗಿ ಪತ್ನಿ ಹುಡುಕಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮರುದಿನವೇ ಬಯಲಾಯ್ತು ಯುವಕನ ಅಸಲಿಯತ್ತು, ಪರಾರಿಯಾದ ಪತಿಗಾಗಿ ಪತ್ನಿ ಹುಡುಕಾಟ

ಬೆಂಗಳೂರು: ಮದುವೆಯಾದ ಮರುದಿನವೇ ಪರಾರಿಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಯುವತಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಹೊಸಕೋಟೆ ನಂದಗುಡಿ ಪೊಲೀಸ್ ಠಾಣೆ ಎದುರು ಯುವತಿ ಪೋಷಕರೊಂದಿಗೆ ಪ್ರತಿಭಟನೆ ಮಾಡಿದ್ದಾರೆ. ಎತ್ತಿನೊಡೆಯನಪುರದ ಯುವತಿ ಹಾಗೂ ಅದೇ ಗ್ರಾಮದ ಸಿಆರ್ಪಿಎಫ್ ಪೊಲೀಸ್ ಪರಸ್ಪರ ಪ್ರೀತಿಸಿದ್ದು, ಮದುವೆಗೆ ಹುಡುಗನ ಮನೆಯವರು ಒಪ್ಪಿಗೆ ನೀಡಿರಲಿಲ್ಲ.

ಫೆಬ್ರವರಿ 19 ರಂದು ಬೆಂಗಳೂರು ಯಲಹಂಕದ ಸಿಆರ್ಪಿಎಫ್ ಕ್ಯಾಂಪ್ ನಲ್ಲಿ ಯುವತಿಗೆ ತಾಳಿ ಕಟ್ಟಿ ಮದುವೆಯಾಗಿದ್ದ ಪೋಲಿಸ್ ಮರುದಿನವೇ ನಾಪತ್ತೆಯಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ ನಂದಗುಡಿ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಯುವಕನಿಗೆ ಬೇರೆ ಯುವತಿಯೊಂದಿಗೆ ಮದುವೆ ಮಾಡಲು ಆತನ ಮನೆಯವರು ಸಿದ್ಧತೆ ನಡೆಸಿದ್ದು, ಈ ಬಗ್ಗೆ ನ್ಯಾಯ ದೊರಕಿಸಿಕೊಡಬೇಕೆಂದು ಯುವತಿ ಪೊಲೀಸರ ಮೊರೆ ಹೋಗಿದ್ದಾರೆ. ಠಾಣೆ ಎದುರು ಪೋಷಕರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಸೂಕ್ತ ಕ್ರಮಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...