alex Certify ‘ದೀಪಾವಳಿಯಂದು ಇಸ್ರೇಲಿ ಒತ್ತೆಯಾಳುಗಳಿಗೆ ಭರವಸೆಯ ದೀಪವನ್ನು ಬೆಳಗಿಸಿ’: ಭಾರತೀಯರಿಗೆ ಇಸ್ರೇಲ್ ರಾಯಭಾರಿ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದೀಪಾವಳಿಯಂದು ಇಸ್ರೇಲಿ ಒತ್ತೆಯಾಳುಗಳಿಗೆ ಭರವಸೆಯ ದೀಪವನ್ನು ಬೆಳಗಿಸಿ’: ಭಾರತೀಯರಿಗೆ ಇಸ್ರೇಲ್ ರಾಯಭಾರಿ ಮನವಿ

ನವದೆಹಲಿ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಡೆದು ಒಂದು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಏತನ್ಮಧ್ಯೆ, ಹಮಾಸ್ ಇನ್ನೂ ಇಸ್ರೇಲ್ನಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ. ಹಮಾಸ್ ಇನ್ನೂ 240 ಜನರನ್ನು ಸೆರೆಯಲ್ಲಿರಿಸಿದೆ ಎಂದು ಹೇಳಲಾಗಿದೆ.

ದೀಪಾವಳಿಯಂದು ಇಸ್ರೇಲಿ ಒತ್ತೆಯಾಳುಗಳಿಗೆ ಭರವಸೆಯ ದೀಪವನ್ನು ಬೆಳಗಿಸುವಂತೆ ಇಸ್ರೇಲ್ ರಾಯಭಾರಿ ಭಾರತಕ್ಕೆ ಮನವಿ  ಮಾಡಿದ್ದಾರೆ. ಇಸ್ರೇಲಿ ರಾಯಭಾರಿ ನಾವರ್ ಗಿಲಾನ್ ತಮ್ಮ ಪೋಸ್ಟ್ನಲ್ಲಿ, “ಭಗವಾನ್ ರಾಮನ ಮರಳುವಿಕೆಯ ನೆನಪಿಗಾಗಿ ದೀಪವನ್ನು ಬೆಳಗಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಮ್ಮ ಆಪ್ತರಿಗೆ ಹಿಂದಿರುಗುವ ಭರವಸೆಯಲ್ಲಿ ದೀಪವನ್ನು ಸಹ ಬೆಳಗಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

“ನಮ್ಮ  240 ಕ್ಕೂ ಹೆಚ್ಚು ಆಪ್ತ ಸ್ನೇಹಿತರನ್ನು ಹಮಾಸ್ ಉಗ್ರರು ಒಂದು ತಿಂಗಳಿನಿಂದ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ಈ ದೀಪಾವಳಿಯಲ್ಲಿ ನಮ್ಮನ್ನು ಪ್ರೀತಿಸುವವರು ಹಿಂತಿರುಗುವ ಭರವಸೆಯಲ್ಲಿ ದೀಪವನ್ನು ಬೆಳಗಿಸುವಂತೆ ನಾವು ನಿಮಗೆ ಮನವಿ ಮಾಡುತ್ತೇವೆ.

ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 1400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, ಸಾವಿರಾರು ಜನರು ಗಾಯಗೊಂಡಿದ್ದಾರೆ. ಇದರೊಂದಿಗೆ, ಹಮಾಸ್ ಅನೇಕ ಇಸ್ರೇಲಿಗಳು ಮತ್ತು ವಿದೇಶಿಯರನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಂಡಿತು. ಕತಾರ್ ಮಧ್ಯಸ್ಥಿಕೆಯ ನಂತರ ಹಮಾಸ್ ಈ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇವರಲ್ಲಿ  ಇಬ್ಬರು ಅಮೆರಿಕನ್ನರು ಮತ್ತು ಇಬ್ಬರು ಇಸ್ರೇಲಿಗಳು ಸೇರಿದ್ದಾರೆ. ಆದಾಗ್ಯೂ, ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಹಮಾಸ್ ಇನ್ನೂ ಯಾವುದೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ.

ಗಾಝಾದಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಮಧ್ಯೆ ಈವರೆಗೆ 10,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 4000 ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...