alex Certify ಮಾವಿನ ಮರದ ಮೇಲೆ ಸಿಲುಕಿ ಪರದಾಡಿದ ಚಿರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾವಿನ ಮರದ ಮೇಲೆ ಸಿಲುಕಿ ಪರದಾಡಿದ ಚಿರತೆ

ಮಾವಿನ ಮರದ ಕೊಂಬೆಯ ಮೇಲೆ ಚಿರತೆ ಅಡ್ಡಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್​ ಕಸ್ವಾನ್​ ಇದನ್ನು ಹಂಚಿಕೊಂಡಿದ್ದಾರೆ.

ಸೂಕ್ಷ್ನವಾಗಿ ಗಮನಿಸಿದರೆ ಚಿರತೆ ಮರದ ಮೇಲೆ ಸಿಲುಕಿಕೊಂಡಿರುವುದು ಕಂಡುಬರುತ್ತದೆ. ಚಿರತೆಯನ್ನು ಹೇಗೆ ರಕ್ಷಿಸಲಾಯಿತು ಎಂಬುದರ ಕುರಿತು ಸುದೀರ್ಘವಾದ ಥ್ರೆಡ್​ ಇದೆ.

ಚಿಕ್ಕ ಕ್ಲಿಪ್​ನಲ್ಲಿ, ಚಿರತೆ ಮಾವಿನ ಮರದ ಅತ್ಯಂತ ಎತ್ತರದ ಕೊಂಬೆಯಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು. ಈ ಚಿರತೆ ಹೇಗೆ ಅಲ್ಲಿಗೆ ತಲುಪಿತು ಮತ್ತು ಜನ ಸಾಗರ ಹೇಗೆ ಸುತ್ತುವರೆದಿದೆ ಎಂದು ಊಹಿಸಿ. ನಾವು ಅದನ್ನು ರಕ್ಷಿಸಬೇಕಾಗಿದೆ ಎಂದು ಸೆಪ್ಟೆಂಬರ್​ 19 ರಂದು ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದರು.

ಮತ್ತೊಂದು ಟ್ವೀಟ್​ನಲ್ಲಿ ಪರ್ವೀನ್​ ಕಸ್ವಾನ್​, ಪ್ರತಿ ಸನ್ನಿವೇಶವು ವಿಶಿಷ್ಟವಾಗಿದೆ, ಹಿಂದಿನ ಅನುಭವವು ಸಹಾಯ ಮಾಡುತ್ತದೆ. 7& 8 ಗಂಟೆಗಳ ಕಾರ್ಯಾಚರಣೆ ಬಳಿಕ ಕಾರ್ಯಾಚರಣೆ ಮೂಲಕ ರಕ್ಷಿಸಲಾಯಿತು, ಇದು 2-3 ತಿಂಗಳ ಹಳೆಯ ಪ್ರಕರಣ ಎಂದೂ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...