alex Certify ಸಹೋದರಿ ಮದುವೆಗೆ 8 ಕೋಟಿ ರೂ. ವರದಕ್ಷಿಣೆ ಕೊಟ್ಟ ಒಡಹುಟ್ಟಿದವರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರಿ ಮದುವೆಗೆ 8 ಕೋಟಿ ರೂ. ವರದಕ್ಷಿಣೆ ಕೊಟ್ಟ ಒಡಹುಟ್ಟಿದವರು….!

ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದಲ್ಲಿ ವರದಕ್ಷಿಣೆ ಕೊಡುವುದು ಕಾನೂನು ಬಾಹಿರವಾಗಿದೆ. ಭಾರತೀಯ ದಂಡ ಸಂಹಿತೆ ಅನುಸಾರ, ವರದಕ್ಷಿಣೆ ಕೇಳಿ ಸಿಕ್ಕಿಬಿದ್ದರೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ. ಇಷ್ಟೆಲ್ಲಾ ಕಠಿಣ ಕಾನೂನುಗಳಿದ್ದರೂ ಸಹ ಭಾರತದಲ್ಲಿ ವರದಕ್ಷಿಣೆಯ ಪರಿಪಾಠ ಢಾಳವಾಗೇ ಸಾಗುತ್ತಿದೆ.

ರಾಜಸ್ಥಾನದ ನಾಗೌರ್‌‌‌ ಜಿಲ್ಲೆಯ ಧಿಂಗ್ಸಾರಾ ಗ್ರಾಮದಲ್ಲಿ ನಾಲ್ಕು ಮಂದಿ ಸಹೋದರರು ತಮ್ಮ ಸಹೋದರಿಯ ವಿವಾಹದಂದು 8 ಕೋಟಿ 31 ಲಕ್ಷ ರೂ.ಗಳ ವರದಕ್ಷಿಣೆ ಕೊಟ್ಟು ಸುದ್ದಿಯಲ್ಲಿದ್ದಾರೆ.

ಮಯ್ರಾ ಎಂದು ಕರೆಯಲಾಗುವ ಈ ಪದ್ಧತಿ ನಾಗೌರ್‌ ಜಿಲ್ಲೆಯಲ್ಲಿ ವಿಪರೀತವಾಗಿದೆ. ಆದರೆ ಈ ನಾಲ್ವರು ಸಹೋದರರು ಭಾರೀ ಪ್ರಮಾಣದ ವರದಕ್ಷಿಣೆ ನೀಡುವ ಮೂಲಕ ದೊಡ್ಡ ಸದ್ದು ಮಾಡಿದ್ದಾರೆ. ಅರ್ಜುನ್ ರಾಮ್‌ ಮೆಹಾರಿಯಾ, ಭಗೀರತ್‌ ಮೆಹಾರಿಯಾ, ಉಮೇಯ್ದ್‌ ಜೀ ಮೆಹಾರಿಯಾ ಹಾಗೂ ಪ್ರಹ್ಲಾದ ಮೆಹಾರಿಯಾ ಮಾರ್ಚ್ 26ರಂದು ತಮ್ಮ ಸಹೋದರಿ ಭನ್ವಾರಿ ದೇವಿಯ ಮದುವೆಯಂದು ಈ ಭಾರೀ ಮೊತ್ತದ ವರದಕ್ಷಿಣೆ ಕೊಟ್ಟಿದ್ದಾರೆ.

ಈಟಿವಿ ಭಾರತ್‌‌ ವರದಿ ಪ್ರಕಾರ, ಈ ವರದಕ್ಷಿಣೆಗೆ 2.21 ಕೋಟಿ ನಗದು, 100 ಭಿಗಾ ಜಮೀನು (ನಾಲ್ಕು ಕೋಟಿ ರೂ. ಬೆಲೆ ಬಾಳುತ್ತದೆ), ಬೇರೊಂದು ಊರಿನಲ್ಲಿ 1 ಭಿಗಾ ಜಮೀನು, 71 ಲಕ್ಷ ರೂ.ನಷ್ಟು ಬೆಲೆ ಬಾಳುವ ಒಂದು ಕೆಜಿ ಚಿನ್ನ, 9.8 ಲಕ್ಷ ರೂ. ನಷ್ಟು ಮೌಲ್ಯದ ಬೆಳ್ಳಿಯನ್ನು ನೀಡಲಾಗಿದೆ. ಮಿಕ್ಕಂತೆ 800 ನಾಣ್ಯಗಳನ್ನು ಗ್ರಾಮಸ್ಥರೆಲ್ಲಾ ಹಂಚಿಕೊಂಡಿದ್ದಾರೆ. ಇದೇ ವೇಳೆ 7 ಲಕ್ಷ ರೂ. ಬೆಲೆಯ ಟ್ರಾಕ್ಟರ್‌ ಅನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಜೊತೆಗೆ ಒಂದು ಸ್ಕೂಟರ್‌ ಹಾಗೂ ಕೆಲ ವಾಹನಗಳನ್ನು ಸಹ ಇದೇ ವೇಳೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...