alex Certify ಶಾಕಿಂಗ್: ಕೆರೆಯಲ್ಲಿತ್ತು ನಾಪತ್ತೆಯಾಗಿದ್ದ ವಿವಾಹಿತೆ ಮೃತದೇಹ, ಆರೋಪಿ ಮನೆ ಮೇಲೆ ಸಂಬಂಧಿಕರ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಕೆರೆಯಲ್ಲಿತ್ತು ನಾಪತ್ತೆಯಾಗಿದ್ದ ವಿವಾಹಿತೆ ಮೃತದೇಹ, ಆರೋಪಿ ಮನೆ ಮೇಲೆ ಸಂಬಂಧಿಕರ ದಾಳಿ

ಮೈಸೂರು: ನಾಪತ್ತೆಯಾಗಿದ್ದ ವಿವಾಹಿತೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 20 ವರ್ಷದ ಶ್ವೇತಾ ಮೃತಪಟ್ಟವರು ಎಂದು ಹೇಳಲಾಗಿದೆ.

ಮೈಸೂರು ತಾಲೂಕಿನ ಮಾರ್ಬಳ್ಳಿ ಕೆರೆಯಲ್ಲಿ ಶ್ವೇತಾ ಅವರ ಮೃತದೇಹ ಪತ್ತೆಯಾಗಿದೆ. ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದ ನಿವಾಸಿಯಾಗಿರುವ ಶ್ವೇತಾ 3 ದಿನದ ಹಿಂದೆ ನಾಪತ್ತೆಯಾಗಿದ್ದರು. ಎರಡು ವರ್ಷಗಳ ಹಿಂದೆ ಶಶಿಕುಮಾರ್ ಜೊತೆಗೆ ಮದುವೆಯಾಗಿದ್ದು, ಕಾಸರಗೋಡಿನಲ್ಲಿ ದಂಪತಿ ನೆಲೆಸಿದ್ದರು. ಒಂದೂವರೆ ತಿಂಗಳ ಹಿಂದೆ ಕೆಂಬಾಲು ಗ್ರಾಮಕ್ಕೆ ಬಂದಿದ್ದ ಶ್ವೇತಾ ಮನೆಯಿಂದ ನಾಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು

ನಿನ್ನೆ ಸಂಜೆ ಮಾರ್ಬಳ್ಳಿ ಕೆರೆಯಲ್ಲಿ ಮೃತದೇಹ ಕಂಡು ಬಂದಿದೆ. ಕೆಂಬಾಲು ಗ್ರಾಮದ ಶಿವು ವಿರುದ್ಧ ಹತ್ಯೆ ಆರೋಪ ಕೇಳಿ ಬಂದಿದೆ. ಆತನ ಮನೆ ಮೇಲೆ ಸಂಬಂಧಿಕರು ದಾಳಿ ಮಾಡಿ ಗಲಾಟೆ ನಡೆಸಿದ್ದಾರೆ. ಬೈಕ್ ಗಳಿಗೆ ಬೆಂಕಿ ಹಚ್ಚಿ ಮನೆ ಹೆಂಚು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕೈಗೊಳ್ಳಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...