alex Certify ವಿವಾಹಿತನಿಂದ ಮಾಜಿ ಪ್ರಿಯತಮೆ ಶಿರಚ್ಛೇದ: ಆರೋಪಿ ನಮಗೊಪ್ಪಿಸಿ ಎಂದು ಠಾಣೆ ಎದುರು ಡೀಸೆಲ್ ಸುರಿದುಕೊಂಡು ಯುವತಿ ಸೋದರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತನಿಂದ ಮಾಜಿ ಪ್ರಿಯತಮೆ ಶಿರಚ್ಛೇದ: ಆರೋಪಿ ನಮಗೊಪ್ಪಿಸಿ ಎಂದು ಠಾಣೆ ಎದುರು ಡೀಸೆಲ್ ಸುರಿದುಕೊಂಡು ಯುವತಿ ಸೋದರ ಆಕ್ರೋಶ

ಹೊಸಪೇಟೆ(ವಿಜಯನಗರ ಜಿಲ್ಲೆ): ವಿವಾಹಿತನಿಂದ ಮಾಜಿ ಪ್ರಿಯತಮೆಯ ಶಿರಚ್ಛೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಹೊಸಳ್ಳಿ ಪೊಲೀಸ್ ಠಾಣೆ ಎದುರು ಹೈಡ್ರಾಮಾ ನಡೆದಿದೆ. ಕನ್ನಿಬೋರನಯ್ಯನ ಹಟ್ಟಿಯಲ್ಲಿ ಯುವತಿ ನಿರ್ಮಲಾ(23) ರುಂಡ ಕತ್ತರಿಸಿ ಭೋಜರಾಜ್ ಹತ್ಯೆ ಮಾಡಿ ರುಂಡದ ಜೊತೆಗೆ ಪೊಲೀಸರಿಗೆ ಶರಣಾಗಿದ್ದ.

ತಂಗಿ ಕೊಂದವನನ್ನು ತನಗೆ ಒಪ್ಪಿಸಿ ಎಂದು ನಿರ್ಮಲಾ ಸಹೋದರ ಶ್ರೀಕಾಂತ್ ಮೈಮೇಲೆ ಡೀಸೆಲ್ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಕಾಂತ್ ಮತ್ತು ಕುಟುಂಬದವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರೆಡ್ಡಿ, ಸಿಪಿಐಗಳಾದ ವಸಂತ್ ಆಸೋದೆ, ಸೋಮಶೇಖರ್, ಪಿಎಸ್ಐಗಳಾದ ತಿಮ್ಮಣ್ಣ ಮತ್ತು ನಾಗರತ್ನ ಹರಸಾಹಸ ನಡೆಸಿದ್ದಾರೆ. ಶ್ರೀಕಾಂತ್ ಮೈಮೇಲೆ ನೀರು ಸುರಿದು ಬಟ್ಟೆ ಬದಲಿಸಿದ್ದಾರೆ. ಜೀಪ್ ನಲ್ಲಿ ಆಸ್ಪತ್ರೆಗೆ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...