alex Certify ರಾಜಕೀಯದಿಂದ ದೂರ ಉಳಿದ ರಾಜ್ ಕುಮಾರ್ ‘ದೇವತಾಮನುಷ್ಯ’ರಾದರು ಎಂದು ಸುದೀಪ್ ಗೆ ಸಚಿವ ಕೆ.ಎನ್. ರಾಜಣ್ಣ ಕಿವಿಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯದಿಂದ ದೂರ ಉಳಿದ ರಾಜ್ ಕುಮಾರ್ ‘ದೇವತಾಮನುಷ್ಯ’ರಾದರು ಎಂದು ಸುದೀಪ್ ಗೆ ಸಚಿವ ಕೆ.ಎನ್. ರಾಜಣ್ಣ ಕಿವಿಮಾತು

ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ನಟ ಸುದೀಪ್ ಪ್ರಚಾರ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಮಾತನಾಡಿದ ಸಚಿವರು, ಡಾ. ರಾಜಕುಮಾರ್ ರಾಜಕೀಯಕ್ಕೆ ಬಂದು ಏನು ಬೇಕಾದರೂ ಆಗಬಹುದಿತ್ತು. ರಾಜಕೀಯದಿಂದ ದೂರ ಉಳಿದಿದ್ದಕ್ಕೆ ಅವರು ದೇವತಾ ಮನುಷ್ಯರಾದರು. ಅವರನ್ನು ಎಲ್ಲಾ ಸಮುದಾಯದವರು ದೇವತಾ ಮನುಷ್ಯ ಎಂದು ಗುರುತಿಸುತ್ತಾರೆ ಎಂದು ಹೇಳಿದ್ದಾರೆ.

ಸಿನಿಮಾ ನಟರು ರಾಜಕೀಯಕ್ಕೆ ಬಂದರೆ ಗೌರವ ಕಡಿಮೆಯಾಗುತ್ತದೆ. ಒಂದು ಸಮುದಾಯದ ಅಭ್ಯರ್ಥಿ ಪರ, ವಿರುದ್ಧ ಪ್ರಚಾರ ಮಾಡಿದರೆ ಆ ಸಮುದಾಯದವರೇ ನಿಮ್ಮ ಪರ ಮತ್ತು ವಿರುದ್ಧ ಆಗುತ್ತಾರೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಕಿವಿಮಾತು ಹೇಳಿದ್ದೇನೆ ಎಂದು ನಟ ಸುದೀಪ್ ಅವರಿಗೆ ಸಚಿವ ರಾಜಣ್ಣ ಕಿವಿಮಾತು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...