alex Certify ‘ಕೋಟಿಗೊಬ್ಬ-3’ ಬಿಡುಗಡೆಗೂ ಮುನ್ನವೇ ಶುರು ಪೈರಸಿ ಕಾಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೋಟಿಗೊಬ್ಬ-3’ ಬಿಡುಗಡೆಗೂ ಮುನ್ನವೇ ಶುರು ಪೈರಸಿ ಕಾಟ….!

ಕೊರೊನಾದಿಂದಾಗಿ ಚಿತ್ರಮಂದಿರಗಳ ಮೇಲೆ ಹಾಕಲಾಗಿದ್ದ ನಿರ್ಬಂಧಗಳನ್ನು ತೆರವು ಮಾಡಿರುವ ಸಂಭ್ರಮದಲ್ಲಿರುವ ಚಿತ್ರತಂಡ ಬಹು ನಿರೀಕ್ಷಿತ ಸ್ಯಾಂಡಲ್​ವುಡ್​ ಸಿನಿಮಾಗಳನ್ನು ಅಕ್ಟೋಬರ್ ತಿಂಗಳಲ್ಲಿಯೇ ರಿಲೀಸ್​ ಮಾಡಲು ಮುಂದಾಗಿವೆ. ಅದರಂತೆಯೇ ಅಭಿನಯ ಚಕ್ರವರ್ತಿ ಸುದೀಪ್​ ನಟನೆಯ ಕೋಟಿಗೊಬ್ಬ 3 ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಆದರೆ ಕೋಟಿಗೊಬ್ಬ 3 ಸಿನಿಮಾ ರಿಲೀಸ್​ಗೂ ಮುನ್ನವೇ ಪೈರಸಿ ಕಾಟ ಶುರುವಾಗಿದೆ.

ಕೊರೊನಾದಿಂದಾಗಿ ಚಿತ್ರಮಂದಿರ ಬಾಗಿಲು ಹಾಕಿದ್ದರಿಂದ ಅನುಭವಿಸಿದ ಕಷ್ಟ ಒಂದೆಡೆಯಾದರೆ ಈಗ ಎಲ್ಲವೂ ಸರಿಯಾದ ಮೇಲೆ ಪೈರಸಿಯ ಕಾಟ ಕೋಟಿಗೊಬ್ಬ ಚಿತ್ರತಂಡಕ್ಕೆ ತಲೆನೋವು ತಂದಿದೆ. ಸಿನಿಮಾವನ್ನು ಪೈರಸಿ ಮಾಡುವ ಬಗ್ಗೆ ಸೋಶಿಯಲ್​ ಮೀಡಿಯಾಗಳಲ್ಲಿ ಪ್ರಚಾರ ಕೂಡ ಮಾಡಲಾಗ್ತಿದೆ.

ಇನ್ನು ಟೆಲಿಗ್ರಾಮ್​ನಲ್ಲಿ ಕೋಟಿಗೊಬ್ಬ 3 ಪೈರಸಿ ಮಾಡುವ ಸಂದೇಶಗಳು ಹರಿದಾಡಿದ್ದನ್ನು ಗಮನಿಸಿದ ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಸಿನಿಮಾಗೆ ಪೈರಸಿ ಸಂಕಷ್ಟ ಎದುರಾಗಿರುವ ಬಗ್ಗೆ ದೂರನ್ನೂ ನೀಡಿದ್ದಾರೆ.

ನಿರ್ಮಾಪಕ ಸೂರಪ್ಪ ಬಾಬು ಎದುರಲ್ಲೇ ಕಮಿಷನರ್​ಗೆ ಕರೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ರು. ಅಲ್ಲದೇ ಸೂರಪ್ಪ ಬಾಬುರಿಗೂ ಕಮಿಷನರ್​ನ್ನು ಭೇಟಿಯಾಗಿ ದೂರು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್​ 14ರಂದು ಬೆಳ್ಳಿ ತೆರೆಯ ಮೇಲೆ ಸವಾರಿ ಮಾಡಲಿದೆ. ಈಗಾಗಲೇ ಪೋಸ್ಟರ್, ಟೀಸರ್ ಹಾಗೂ ಟ್ರೈಲರ್‌ ಮೂಲಕ ಜನರ ಗಮನ ಸೆಳೆದಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...