alex Certify ಅಣ್ಣ, ತಮ್ಮನಿಗೆ ಮದುವೆ: ತನಗೂ ಮದುವೆ ಮಾಡುವಂತೆ ಪೀಡಿಸಿದ ಪುತ್ರನಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಣ್ಣ, ತಮ್ಮನಿಗೆ ಮದುವೆ: ತನಗೂ ಮದುವೆ ಮಾಡುವಂತೆ ಪೀಡಿಸಿದ ಪುತ್ರನಿಂದಲೇ ಘೋರ ಕೃತ್ಯ

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಮಾರುತಿ ನಗರದಲ್ಲಿ ಮದುವೆ ಮಾಡದ ಕಾರಣಕ್ಕೆ ತಂದೆಯನ್ನೇ ಪುತ್ರ ಕೊಲೆ ಮಾಡಿದ್ದಾನೆ.

65 ವರ್ಷದ ಸಣ್ಣಯ್ಯ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಅವರ ಪುತ್ರ ವೆಂಕಟೇಶ್ ಕೊಲೆ ಆರೋಪಿಯಾಗಿದ್ದಾನೆ. ಬೆಂಗಳೂರಿನಲ್ಲಿ ಲಾರಿ ಚಾಲಕನಾಗಿದ್ದ ವೆಂಕಟೇಶ್ ಲಾಕ್ಡೌನ್ ಕಾರಣದಿಂದ ಮನೆಯಲ್ಲೇ ಇದ್ದು, ಹಣಕ್ಕಾಗಿ ಪೀಡಿಸುತ್ತಿದ್ದ. 6 ತಿಂಗಳ ಹಿಂದೆ ತನಗೆ ಮದುವೆ ಮಾಡಿಲ್ಲ ಎಂದು ತಂದೆಯ ಕಾಲು ಮುರಿದಿದ್ದ ಎನ್ನಲಾಗಿದೆ.

ಸಣ್ಣಯ್ಯ ಅವರ ಮೂವರು ಮಕ್ಕಳಲ್ಲಿ ವೆಂಕಟೇಶ್ ಎರಡನೇ ಮಗನಾಗಿದ್ದು ಮೊದಲ ಮತ್ತು ಮೂರನೇ ಮಗನಿಗೆ ಮದುವೆಯಾಗಿದೆ. ವೆಂಕಟೇಶ್ ಕುಡಿದು ಬಂದು ತಂದೆಯೊಂದಿಗೆ ಜಗಳವಾಡಿ ಕೊಲೆ ಮಾಡಿದ್ದಾನೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...