alex Certify ಬಹುದಿನಗಳ ಬಳಿಕ ದೇವರ ದರ್ಶನ: ಭಕ್ತರಿಗೆಲ್ಲ ಸರ್ಕಾರದಿಂದ ‘ಸಿಹಿ ಸುದ್ದಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುದಿನಗಳ ಬಳಿಕ ದೇವರ ದರ್ಶನ: ಭಕ್ತರಿಗೆಲ್ಲ ಸರ್ಕಾರದಿಂದ ‘ಸಿಹಿ ಸುದ್ದಿ’

ಬೆಂಗಳೂರು: ಲಾಕ್ ಡೌನ್ ನಡುವೆಯೂ ಕೆಲವೊಂದು ವಿನಾಯತಿಗಳನ್ನು ನೀಡಿರುವ ಸರ್ಕಾರ ಜಿಮ್, ಫಿಟ್ನೆಸ್ ಸೆಂಟರ್ ಗಳನ್ನು ಮುಂದಿನ ವಾರದಿಂದ ತೆರೆಯಲು ಅವಕಾಶ ನೀಡಲು ಮುಂದಾಗಿದೆ.

ಇದೇ ವೇಳೆ ದೇವಾಲಯಗಳನ್ನು ಕೂಡ ತೆರೆಯಲು ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಷರತ್ತುಗಳೊಂದಿಗೆ ದೇವಾಲಯಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಯಾವುದೇ ದೇವಾಲಯಗಳಲ್ಲಿ ಭಕ್ತರಿಗೆ, ಪ್ರಸಾದ, ತೀರ್ಥ ಕೊಡುವಂತಿಲ್ಲ. ಹೂವು, ಹಣ್ಣು ತರುವಂತಿಲ್ಲ. ಸರತಿ ಸಾಲಿನಲ್ಲಿ ನಿಂತು ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ಧಪಡಿಸಿ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...