alex Certify BIG NEWS: ಸಿಟಿ ಸ್ಕ್ಯಾನ್​ ಹಗಲು ದರೋಡೆಗೆ ಮೂಗುದಾರ ಹಾಕಿದ ರಾಜ್ಯ ಸರ್ಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಟಿ ಸ್ಕ್ಯಾನ್​ ಹಗಲು ದರೋಡೆಗೆ ಮೂಗುದಾರ ಹಾಕಿದ ರಾಜ್ಯ ಸರ್ಕಾರ..!

ಕೋವಿಡ್​ ಸೋಂಕು ಆರಂಭವಾದಾಗಿನಿಂದ ಜನರಿಗೆ ವೈದ್ಯಕೀಯ ಸೌಲಭ್ಯಗಳ ದರ ಗಗನಕ್ಕೇರಿದೆ. ಕೋವಿಡ್​ ರಿಪೋರ್ಟ್​ ಬಂದ ಬಳಿಕ ಬಹುತೇಕ ರೋಗಿಗಳಿಗೆ ಸಿಟಿ ಸ್ಕ್ಯಾನ್​​ ನಡೆಸುವಂತೆ ಸೂಚನೆ ನೀಡಲಾಗುತ್ತೆ. ಆದರೆ ಖಾಸಗಿ ಲ್ಯಾಬ್​ಗಳಲ್ಲಿ ಸಿಟಿ ಸ್ಕ್ಯಾನ್​ ನಡೆಸಲು 7000 ರಿಂದ 10000 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಈ ಸಂಬಂಧ ಸಾಕಷ್ಟು ದೂರುಗಳನ್ನ ಸ್ವೀಕರಿಸಿದ ರಾಜ್ಯ ಸರ್ಕಾರ ಇದೀಗ ಇಂತಹ ಲ್ಯಾಬ್​ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಸಿಟಿ ಸ್ಕ್ಯಾನ್​ ಹಗಲು ದರೋಡೆಗೆ ಕಡಿವಾಣ ಹಾಕಿರುವ ರಾಜ್ಯ ಸರ್ಕಾರ ಪ್ರತಿ ಸಿಟಿ ಸ್ಕ್ಯಾನ್ 1500 ರೂಪಾಯಿಯನ್ನ ಮಾತ್ರ ಪಡೆಯಬೇಕು ಎಂದು ಆದೇಶ ಪ್ರಕಟಿಸಿದೆ. ಸರ್ಕಾರದ ಆದೇಶದ ಹೊರತಾಗಿಯೂ ಹೆಚ್ಚಿನ ದರ ತೆಗೆದುಕೊಳ್ಳುತ್ತಿರೋದು ಕಂಡುಬಂದಲ್ಲಿ ಅಂತಹ ಆಸ್ಪತ್ರೆ ಲ್ಯಾಬ್​ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಖಡಕ್​ ವಾರ್ನಿಂಗ್​ ನೀಡಿದೆ.

ಕರ್ನಾಟಕಕ್ಕೆ ಆಕ್ಸಿಜನ್​ ರಿಲೀಫ್​​..! ರಾಜ್ಯಕ್ಕೆ 1200 ಮೆ.ಟನ್​ ಆಮ್ಲಜನಕ ಪೂರೈಸುವಂತೆ ಸುಪ್ರೀಂ ಆದೇಶ

ಕೊರೊನಾ ಲಕ್ಷಣಗಳನ್ನ ಹೊಂದಿದ ಬಳಿಕವೂ ಆರ್​ಟಿ ಪಿಸಿಆರ್​ ಟೆಸ್ಟ್​ನಲ್ಲಿ ಕೆಲವರ ಕೊರೊನಾ ವರದಿ ನೆಗೆಟಿವ್​ ಬರುತ್ತೆ. ಇಂತಹ ಸಂದರ್ಭದಲ್ಲಿ ವೈದ್ಯರು ಸಾಮಾನ್ಯವಾಗಿ ಸಿಟಿ ಸ್ಕ್ಯಾನ್​ ಮಾಡಿಸುವಂತೆ ಸಲಹೆಯನ್ನ ನೀಡುತ್ತಾರೆ. ಆದರೆ ಇದೇ ಪರಿಸ್ಥಿತಿಯ ಲಾಭ ಪಡೆದಿರುವ ಕೆಲ ಖಾಸಗಿ ಲ್ಯಾಬ್​ಗಳು ಹಗಲು ದರೋಡೆಗೆ ಮುಂದಾಗಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...