alex Certify ರಾಜಕೀಯ ಮುತ್ಸದ್ಧಿ ಸಿದ್ಧರಾಮಯ್ಯನವರೇ ವಿದೂಷಕನಂತೆ ವರ್ತಿಸಿ ಅಪ್ರಬುದ್ಧರಾಗಬೇಡಿ: ವಿಶ್ವನಾಥ್ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯ ಮುತ್ಸದ್ಧಿ ಸಿದ್ಧರಾಮಯ್ಯನವರೇ ವಿದೂಷಕನಂತೆ ವರ್ತಿಸಿ ಅಪ್ರಬುದ್ಧರಾಗಬೇಡಿ: ವಿಶ್ವನಾಥ್ ತಿರುಗೇಟು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಡು ಮನುಷ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿರುವುದಕ್ಕೆ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರೇ ಆಸ್ಥಾನದ ವಿದೂಷಕನಂತೆ ವರ್ತಿಸಬೇಡಿ. ನೀವು ಒಬ್ಬ ರಾಜಕೀಯ ಮುತ್ಸದ್ದಿಯಂತೆ ವರ್ತನೆ ಮಾಡಿ. ‘ಹೌದು ಹುಲಿಯಾ’ ಎನ್ನುವುದನ್ನು ನೀವೇ ಒಪ್ಪಿಕೊಂಡಿದ್ದೀರಿ. ‘ಕನಕಪುರ ಬಂಡೆ’ ಅಂದಾಗ ಡಿಕೆಶಿ ಸದನದಲ್ಲಿ ಖುಷಿಪಟ್ಟಿದ್ದಾರೆ. ಇವೆಲ್ಲ ನಿಮ್ಮ ಅಭಿಮಾನಿಗಳು ಕೊಟ್ಟಿರುವ ಬಿರುದುಗಳು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊಟ್ಟಿರುವ ಬಿರುದುಗಳಲ್ಲ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯನವರೇ ಈಗ ನೀವು ಬಳಸಿದ ಭಾಷೆಯನ್ನು ಒಪ್ಪುವಂತಹುದಲ್ಲ. ಅದು ಕಾಡಿನ ಜನರಿಗೆ ನೀವು ಮಾಡಿರುವಂತಹ ಅವಮಾನವಾಗಿದೆ. ಸಿದ್ದರಾಮಯ್ಯನವರಿಗೆ ಏಕವಚನ, ಬಹುವಚನ ಕೂಡ ಗೊತ್ತಿಲ್ಲ. ಆದರೆ, ಅವರು ಬೇರೆಯವರಿಗೆ ಸಂಧಿ ಪಾಠ ಮಾಡುತ್ತಾರೆ. ಪ್ರಬುದ್ಧ ಎಂದು ತೋರಿಸಿಕೊಳ್ಳಲು ಹೋಗಿ ಅಪ್ರಬುದ್ಧರಾಗುತ್ತಿದ್ದಾರೆ. ಜನ ನಿಮ್ಮ ತಲೆ ಖಾಲಿಯಾಗಿ ವಿವೇಚನೆ ಇಲ್ಲ ಎಂದುಕೊಳ್ಳುತ್ತಾರೆ ಎಂದು ವಿಶ್ವನಾಥ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...