alex Certify ಉಟ್ಟ ಸೀರೆಯನ್ನೇ ಬಿಚ್ಚಿ ಕೊಟ್ಟು ಮಾನವೀಯತೆ ತೋರಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಟ್ಟ ಸೀರೆಯನ್ನೇ ಬಿಚ್ಚಿ ಕೊಟ್ಟು ಮಾನವೀಯತೆ ತೋರಿದ ಮಹಿಳೆ

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನೀರಿನಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆಗಾಗಿ ಮಹಿಳೆಯೊಬ್ಬರು ಸೀರೆಯನ್ನು ಬಿಚ್ಚಿ ಕೊಟ್ಟ ಘಟನೆ ನಡೆದಿದೆ.

ಆಳವಾದ ಕಾಲುವೆ ನೀರಿನಲ್ಲಿ ಬಾಲಕ ಮುಳುಗುತ್ತಿದ್ದು, ಆತನನ್ನು ರಕ್ಷಿಸಲು ಮಹಿಳೆ ಸೀರೆ ಕೊಟ್ಟು ನೆರವಾಗಿದ್ದಾರೆ. 6 ವರ್ಷದ ಬಾಲಕ ಅರವಿಂದ್ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಒದ್ದಾಡುತ್ತಿದ್ದ. ವ್ಯಕ್ತಿಯೊಬ್ಬರು ನೀರಿಗೆ ಜಿಗಿದು ಆತನನ್ನು ರಕ್ಷಿಸಲು ಮುಂದಾಗಿದ್ದು ಕಾಲುವೆ ಆಳವಾಗಿದ್ದ ಕಾರಣ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ.

ಈ ವೇಳೆ ಉಟ್ಟಿದ್ದ ಸೀರೆಯನ್ನು ಬಿಚ್ಚಿ ಒಂದು ತುದಿಯನ್ನು ತಾವು ಹಿಡಿದುಕೊಂಡು ಮತ್ತೊಂದನ್ನು ನೀರಿನಲ್ಲಿದ್ದ ವ್ಯಕ್ತಿ ಮತ್ತು ಬಾಲಕನಿಗೆ ಕೊಟ್ಟಿದ್ದಾರೆ. ಸಿರೆ ಹಿಡಿದುಕೊಂಡ ಬಾಲಕ ಮತ್ತು ವ್ಯಕ್ತಿ ದಡ ತಲುಪಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...