alex Certify BIG NEWS: ಚುನಾವಣೆ ಮುಗಿದ ನಂತರ ನೇಮಕಾತಿ ಆದೇಶ, ಸರ್ಕಾರದ ಭರವಸೆ ಹಿನ್ನಲೆ ಉಪನ್ಯಾಸಕರ ಧರಣಿ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚುನಾವಣೆ ಮುಗಿದ ನಂತರ ನೇಮಕಾತಿ ಆದೇಶ, ಸರ್ಕಾರದ ಭರವಸೆ ಹಿನ್ನಲೆ ಉಪನ್ಯಾಸಕರ ಧರಣಿ ವಾಪಸ್

ಬೆಂಗಳೂರು: ಸರ್ಕಾರದ ಭರವಸೆ ಹಿನ್ನಲೆಯಲ್ಲಿ ಪಿಯು ಉಪನ್ಯಾಸಕರು ಧರಣಿ ಕೈಬಿಟ್ಟಿದ್ದಾರೆ. ಚುನಾವಣೆ ಮುಗಿದ ಬಳಿಕ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಧರಣಿ ವಾಪಸ್ ಪಡೆಯಲಾಗಿದೆ.

ಕೌನ್ಸೆಲಿಂಗ್ ಮುಗಿದರೂ ನೇಮಕಾತಿ ಆದೇಶ ನೀಡದ ಕಾರಣ 8 ದಿನಗಳಿಂದ ಉಪನ್ಯಾಸಕರು ಆಹೋರಾತ್ರಿ ಧರಣಿ ನಡೆಸಿದ್ದರು. ಮಲ್ಲೇಶ್ವರಂ ಪಿಯು ಬೋರ್ಡ್ ಎದುರು ಧರಣಿ ನಡೆಸುತ್ತಿದ್ದರು.

ನವೆಂಬರ್ ಎರಡನೇ ವಾರದಲ್ಲಿ ಉಪನ್ಯಾಸಕರಿಗೆ ಆದೇಶದ ಪ್ರತಿ ನೀಡಲು ತೀರ್ಮಾನಿಸಲಾಗಿದೆ ಎಂದು ಉಪನ್ಯಾಸಕರ ಜೊತೆ ಚರ್ಚೆಯ ಬಳಿಕ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...