alex Certify ಹನಿಮೂನ್​ ಪ್ಲಾನ್​ ರದ್ದು ಮಾಡಿ ತ್ಯಾಜ್ಯ ಹೆಕ್ಕಿದ ನವಜೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನಿಮೂನ್​ ಪ್ಲಾನ್​ ರದ್ದು ಮಾಡಿ ತ್ಯಾಜ್ಯ ಹೆಕ್ಕಿದ ನವಜೋಡಿ..!

ಹೆಚ್ಚಿನ ನವವಿವಾಹಿತರು ಮದುವೆಯ ಬಳಿಕ ಹನಿಮೂನ್​ಗಾಗಿ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ ಕರ್ನಾಟಕದ ನವ ಜೋಡಿಯೊಂದು ಹನಿಮೂನ್​ಗಾಗಿ ಮೀಸಲಿಟ್ಟಿದ್ದ ಸಮಯದಲ್ಲಿ ಪರಿಸರ ಕಾಳಜಿ ಮೆರೆದಿದ್ದಾರೆ.

ಅನುದೀಪ್​ ಹೆಗಡೆ ಹಾಗೂ ಮಿನುಶಾ ಕಾಂಚನ್ ಇತರೆ ನವಜೋಡಿಯಂತೆಯೇ ಹನಿಮೂನ್​ಗೆ ಸುಂದರವಾದ ಸ್ಥಳವೊಂದನ್ನ ಆಯ್ಕೆ ಮಾಡಿದ್ದರು, ಆದರೆ ಉಡುಪಿ ಜಿಲ್ಲೆಯ ಬೈಂದೂರು ಸಮುದ್ರದ ಬಳಿ ಪ್ರಿ ವೆಡ್ಡಿಂಗ್​ ಫೋಟೊ ಶೂಟ್​ ವೇಳೆ ಅಲ್ಲಿ ತ್ಯಾಜ್ಯ ಸಂಗ್ರಹವಾಗಿರೋದನ್ನ ಗಮನಿಸಿದ ದಂಪತಿ, ತಮ್ಮ ಹನಿಮೂನ್​ ಪ್ಲಾನ್​​ ರದ್ದು ಮಾಡಿ ಸೋಮೇಶ್ವರ ಬೀಚ್​​ ಸ್ವಚ್ಛ ಮಾಡೋಕೆ ಮುಂದಾಗಿದ್ದಾರೆ.

ನವೆಂಬರ್​ 18ರಂದು ವಿವಾಹವಾಗಿದ್ದ ಈ ದಂಪತಿ ಎರಡು ವಾರಗಳ ಕಾಲ ಬೀಚ್​ನ್ನು ಸ್ವಚ್ಚ ಮಾಡಿದ್ದಾರೆ. ಸೋಮೇಶ್ವರ ಬೀಚ್​​ನಿಂದ 800 ಕೆಜಿ ತ್ಯಾಜ್ಯವನ್ನ ಸಂಗ್ರಹಿಸಿ ಬೇರೆಡೆ ಸ್ಥಳಾಂತರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...