alex Certify ಅಪ್ಪನ ಬುದ್ಧಿವಾದಕ್ಕೆ ಆತ್ಮಹತ್ಯೆಗೆ ಶರಣಾದ ಮಗ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಮಾಡಿದ್ದೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನ ಬುದ್ಧಿವಾದಕ್ಕೆ ಆತ್ಮಹತ್ಯೆಗೆ ಶರಣಾದ ಮಗ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಮಾಡಿದ್ದೇನು ಗೊತ್ತಾ…..?

ಮೈಸೂರು: ತಂದೆ ಹಾಗೂ ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ದುಡುಕಿನ ನಿರ್ಧಾರ ತೆಗೆದುಕೊಂಡ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿಯಲ್ಲಿ ನಡೆದಿದೆ.

ಹರೀಶ್ ಹಾಗೂ ವೆಂಕಟೇಶ್ ಆತ್ಮಹತ್ಯೆಗೆ ಶರಣಾದ ಅಣ್ಣ-ತಮ್ಮಂದಿರು. ಹರೀಶ್ ಟ್ರ್ಯಾಕ್ಟರ್ ಚಾಲಕನಾಗಿದ್ದ. ರ್ಯಾಷ್ ಆಗಿ ಟ್ರ್ಯಾಕ್ಟರ್ ಓಡಿಸಬೇಡ ಎಂದು ತಂದೆ ಮಗನಿಗೆ ಬುದ್ಧಿ ಹೇಳಿದ್ದಾರೆ. ಅಲ್ಲದೇ ಅಣ್ಣ ವೆಂಕಟೇಶ್ ಕೂಡ ತಮ್ಮನಿಗೆ ಬುದ್ಧಿ ಹೇಳಿದ್ದಾನೆ. ಅಪ್ಪ ಬುದ್ಧಿ ಹೇಳಿದ್ದು ಮಾತ್ರವಲ್ಲ, ಪ್ರೀತಿಯ ಅಣ್ಣನೂ ತನಗೆ ಬೈದು ಬುದ್ಧಿ ಹೇಳಿದನಲ್ಲ ಎಂಬು ಬೇಸರಗೊಂಡ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾವನಿಂದಲೇ ಲೈಂಗಿಕ ಕಿರುಕುಳ, ದೂರು ನೀಡಿದ ಸೊಸೆ

ತಮ್ಮ ಆತ್ಮಹತ್ಯೆಗೆ ಶರಣಾದ ವಿಷಯ ಕೇಳಿದ ಅಣ್ಣ ವೆಂಕಟೇಶ್, ಸಹೋದರನ ಸಾವಿಗೆ ತನ್ನ ಮಾತೇ ಕಾರಣ ಎಂದು ನೊಂದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...