alex Certify ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ, ಐದು ಮಂದಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ, ಐದು ಮಂದಿ ಅರೆಸ್ಟ್

ನೆಲಮಂಗಲ: ಆಟೋ ಚಾಲಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಗಂಡನನ್ನೇ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.

ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ ಮಹಿಳೆ ಸೇರಿ ಐದು ಮಂದಿಯನ್ನು ಬಂಧಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕು ದೊಡ್ಡರಾಯಪ್ಪನಹಳ್ಳಿಯ 40 ವರ್ಷದ ಬೀರೇಗೌಡ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ.

ರಾಜನಕುಂಟೆಯ ವೇಣುಗೋಪಾಲಸ್ವಾಮಿ ಬಡಾವಣೆ ನಿವಾಸಿ ಕಲ್ಪನಾ, ಸಾದೇನಹಳ್ಳಿ ಬಡಾವಣೆ ನಿವಾಸಿ ಲಕ್ಷ್ಮಣ, ಪ್ರದೀಪ, ಹೆಸರುಘಟ್ಟದ ಅಜಯ್ ಹಾಗೂ ದರ್ಶನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬೀರೇಗೌಡನ ಪತ್ನಿ ಕಲ್ಪನಾ ಆಟೋ ಚಾಲಕ ಲಕ್ಷ್ಮಣನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ತಮ್ಮ ಸಂಬಂಧ ಗಂಡ ಅಡ್ಡಿಯಾಗಿದ್ದಾನೆ ಎಂದು ಸಂಚು ರೂಪಿಸಿ ಕೊಲೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.

ನವೆಂಬರ್ 21 ರಂದು ಬೀರೇಗೌಡನನ್ನು ಕೊಲೆ ಮಾಡಿದ ಆರೋಪಿಗಳು ಆಟೋದಲ್ಲಿ ಶವ ಸಾಗಿಸಿದ್ದರು. ಮಾರ್ಗಮಧ್ಯೆ ವಾಹನದಲ್ಲೇ ಮೃತದೇಹವನ್ನು ಇಟ್ಟು ದರೋಡೆಕೋರರು ಕೊಲೆ ಮಾಡಿರುವಂತೆ ಬಿಂಬಿಸಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...