alex Certify ಬಾಡಿಗೆಗೆ ಇದ್ದ ದಂಪತಿಯಿಂದಲೇ ಬೆಚ್ಚಿ ಬೀಳಿಸುವ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಡಿಗೆಗೆ ಇದ್ದ ದಂಪತಿಯಿಂದಲೇ ಬೆಚ್ಚಿ ಬೀಳಿಸುವ ಕೃತ್ಯ

ಬೆಂಗಳೂರಿನ ಕಾಡುಗೋಡಿಯಲ್ಲಿ ಹಣಕ್ಕಾಗಿ ವೃದ್ಧೆ ಕೊಂದ ದಂಪತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಚನ್ನಸಂದ್ರ ಕಲ್ಲಪ್ಪ ಲೇಔಟ್ ನಿವಾಸಿಗಳಾಗಿರುವ ರಾಯಚೂರು ಮೂಲದ ವೀರೇಶ್ ಮತ್ತು ಚೈತ್ರಾ ಆಗಸ್ಟ್ 12 ರಂದು ಹಾಡಹಗಲೇ ಮನೆಗೆ ನುಗ್ಗಿ ಜಯಮ್ಮ(65) ಅವರ ಕತ್ತು ಕೊಯ್ದು ಕೊಲೆ ಮಾಡಿ 45 ಲಕ್ಷ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಜಯಮ್ಮ ಅವರ ಕಟ್ಟಡದಲ್ಲಿಯೇ ಬಾಡಿಗೆಗೆ ದಂಪತಿ ಹಣಕ್ಕಾಗಿ ಇಂತಹ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ವೀರೇಶ್, ಚೈತ್ರಾ ಮತ್ತು ವೀರೇಶನ ಸ್ನೇಹಿತ ಪ್ರಶಾಂತ್ ಸೇರಿಕೊಂಡು ಜಯಮ್ಮರನ್ನು ಕೊಲೆ ಮಾಡಿ ಹಣ, ಚಿನ್ನಾಭರಣ ದೋಚಿದ್ದರು ಎಂದು ಡಿಸಿಪಿ ದೇವರಾಜು ಹೇಳಿದ್ದಾರೆ.

ಮನೆಯ ಬಾಡಿಗೆಯಿಂದ ಬರುತ್ತಿದ್ದ ಹಣದಲ್ಲಿ ಜಯಮ್ಮ ಜೀವನ ಸಾಗಿಸುತ್ತಿದ್ದರು. ಇವರ ಮನೆಯಲ್ಲಿ ಬಾಡಿಗೆಗೆ ಇದ್ದ ವೀರೇಶ್, ಚೈತ್ರಾ ಲಾಕ್ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ಮನೆಯಲ್ಲೇ ಉಳಿದುಕೊಂಡಿದ್ದರು. ಹಣವಿಲ್ಲದ ಕಾರಣ ಇಂತಹ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...