alex Certify ಅಂಧ ವ್ಯಕ್ತಿ ಅಹವಾಲು ಆಲಿಸಲು ಪೀಠದಿಂದ ಎದ್ದುಬಂದ ನ್ಯಾಯಾಧೀಶರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಧ ವ್ಯಕ್ತಿ ಅಹವಾಲು ಆಲಿಸಲು ಪೀಠದಿಂದ ಎದ್ದುಬಂದ ನ್ಯಾಯಾಧೀಶರು…!

ಕೋಲಾರ: ಮನೆ ಗೋಡೆ ಒತ್ತುವರಿ ಸಮಸ್ಯೆ ಕುರಿತು ಕೋರ್ಟ್ ಮೆಟ್ಟಿಲೇರಿದ್ದ ಅಂಧ ವ್ಯಕ್ತಿಯ ಸಮಸ್ಯೆ ಆಲಿಸಲು ಸ್ವತಃ ನ್ಯಾಯಾಧೀಶರೇ ಅಂಧ ವ್ಯಕ್ತಿ ಬಳಿ ಬಂದು ಆತನ ಸಂಕಷ್ಟ ಆಲಿಸಿ, ನ್ಯಾಯದಾನ ಮಾಡಿರುವ ಘಟನೆ ಮುಳಬಾಗಿಲಿನ ಜೆಎಂಎಫ್ಸಿ ಕೋರ್ಟ್ ಆವರಣದಲ್ಲಿ ನಡೆದಿದೆ.

ತನ್ನ ಸಮಸ್ಯೆಯನ್ನು ಹೊತ್ತು ತಂದಿದ್ದ ಮುಳಬಾಗಿಲು ನಿವಾಸಿಯಾಗಿರುವ ದಿವ್ಯಾಂಗ ವ್ಯಕ್ತಿ ದೇವರಾಜ್, ಕೋರ್ಟ್ ಗೇಟ್ ಹೊರಗಿನ ಕಟ್ಟೆಯ ಮೇಲೆಯೇ ಕುಳಿತಿದ್ದರು. ನ್ಯಾಯಾಧೀಶರಾಗಿರುವ ಹಾಜಿ ಹುಸೇನ್ ಸಾಬ್, ದಿವ್ಯಾಂಗ ವ್ಯಕ್ತಿಯ ಬಳಿ ಬಂದು ಅವರ ಸಮಸ್ಯೆಯನ್ನು ಆಲಿಸಿ, ಅಲ್ಲಿಯೇ ವಿಚಾರಣೆ ನಡೆಸಿ ಕಳುಹಿಸಿದ್ದಾರೆ.

ಅಂಧ ವ್ಯಕ್ತಿ ದೇವರಾಜ್ ತನ್ನ ಮನೆ ಗೋಡೆ ಒತ್ತುವರಿ ಸಮಸ್ಯೆ ಬಗ್ಗೆ ದೂರು ನೀಡಲೆಂದು ಕೋರ್ಟ್ ಗೆ ಆಗಮಿಸಿದ್ದರು. ನ್ಯಾಯಾಲಯದ ಹೊರಗಡೆಯೇ ತನ್ನ ಸಮಸ್ಯೆಯನ್ನು ಆಲಿಸಿ ಬಗೆಹರಿಸಿಕೊಡುವುದಾಗಿ ನ್ಯಾಯಾಧೀಶರು ಭರವಸೆ ನೀಡಿದ್ದು, ತನಗೆ ಸಂತಸವಾಗಿದೆ ಎಂದು ದೇವರಾಜ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...