ಬೆಂಗಳೂರು: ನಿರೀಕ್ಷೆಯಂತೆ ಜೂನ್ 1 ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿದ್ದು, ಇದಾದ 2 ದಿನಗಳಲ್ಲಿ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ಅಂತೆಯೇ ಜೂನ್ 3 ಬುಧವಾರ ಮುಂಗಾರು ಮಾರುತಗಳು ರಾಜ್ಯದ ಕರಾವಳಿ ಭಾಗಕ್ಕೆ ಪ್ರವೇಶಿಸಲಿದೆ ಎಂದು ಹೇಳಲಾಗಿದೆ. ಈ ಬಾರಿ ದೇಶಾದ್ಯಂತ ಉತ್ತಮ ಮಳೆಯಾಗಲಿದೆ. ಕಳೆದ ವರ್ಷ ಜೂನ್ 6 ರಂದು ಮುಂಗಾರು ಆಗಮನವಾಗಿತ್ತು.
ಈ ಬಾರಿ ನಿರೀಕ್ಷೆಯಂತೆಯೇ ಮುಂಗಾರು ಕೇರಳ ಪ್ರವೇಶಿಸಿರುವುದರಿಂದ ಜೂನ್ 3 ರಿಂದ ರಾಜ್ಯ ಕರಾವಳಿಗೆ ಮುಂಗಾರು ಎಂಟ್ರಿ ಕೊಡಲಿದೆ. ನಾಳೆಯೊಳಗೆ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಹೇಳಲಾಗಿದೆ.