alex Certify ಮೊಬೈಲ್ ಖರೀದಿ ನೆಪದಲ್ಲಿ ಬಂದವರಿಂದ ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಖರೀದಿ ನೆಪದಲ್ಲಿ ಬಂದವರಿಂದ ಆಘಾತಕಾರಿ ಕೃತ್ಯ

ಹುಬ್ಬಳ್ಳಿ: ಓಎಲ್ಎಕ್ಸ್ ನಲ್ಲಿ ಜಾಹೀರಾತು ಗಮನಿಸಿ ಮೊಬೈಲ್ ಖರೀದಿಗೆ ಬಂದಿದ್ದ ಇಬ್ಬರು ಮೊಬೈಲ್ ಕಸಿದು ಪರಾರಿಯಾಗಿರುವ ಎರಡು ಪ್ರತ್ಯೇಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಯುವಕ ಮೊಬೈಲ್ ಮಾರಾಟ ಮಾಡಲು ಓಎಲ್ಎಕ್ಸ್ ನಲ್ಲಿ ಜಾಹೀರಾತು ಹಾಕಿದ್ದು, ಆತನಿಂದ ಮೊಬೈಲ್ ಖರೀದಿಸಲು ಬಂದಿದ್ದ ಇಬ್ಬರು ಯುವಕರು ಮೇ 29 ರಂದು ಎಪಿಎಂಸಿ ನವನಗರ ಗೇಟ್ ಬಳಿ ಯುವಕನನ್ನು ದೂಡಿ ಆತನ ಕೈಯಲ್ಲಿದ್ದ 20 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಮತ್ತು ಖರೀದಿ ಬಿಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದೇ ರೀತಿ, ಗಾಮನಗಟ್ಟಿ ನಿವಾಸಿಯೊಬ್ಬರು ಓಎಲ್ಎಕ್ಸ್ ನಲ್ಲಿ ಮೊಬೈಲ್ ಮಾರಾಟ ಮಾಡಲು ಜಾಹೀರಾತು ಹಾಕಿದ್ದು ಅವರ ಮೊಬೈಲ್ ಕರೆ ಮಾಡಿದ ಯುವಕರು ಜೂನ್ 4 ರಂದು ಕರಿಯಮ್ಮದೇವಿ ದೇವಾಲಯದ ಬಳಿ 40 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಎರಡು ಪ್ರಕರಣಗಳಲ್ಲಿ ಇಬ್ಬರು ಯುವಕರು ಭಾಗಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...