alex Certify ಕೆಲಸ ಮಾಡಲು ಆಗದಿದ್ದರೆ ಸಿಎಂ ಸ್ಥಾನ ತ್ಯಜಿಸಿ: ಬಿಎಸ್​ವೈ ವಿರುದ್ಧ ಯತ್ನಾಳ್​ ಗುಡುಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಮಾಡಲು ಆಗದಿದ್ದರೆ ಸಿಎಂ ಸ್ಥಾನ ತ್ಯಜಿಸಿ: ಬಿಎಸ್​ವೈ ವಿರುದ್ಧ ಯತ್ನಾಳ್​ ಗುಡುಗು

ಸಿಎಂ ಬಿ.ಎಸ್.​ ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮತ್ತೊಮ್ಮೆ ಗುಡುಗಿದ್ದಾರೆ. ರಾಜ್ಯದಲ್ಲಿ ಕೊರೊನಾ ನಿರ್ವಹಣೆ ಕುರಿತಂತೆ ವಿಜಯಪುರದಲ್ಲಿ ಆಕ್ರೋಶ ಹೊರಹಾಕಿದ ಯತ್ನಾಳ್,​​ ಸಿಎಂ ಬಿಎಸ್​ವೈ ಮನೆಯಲ್ಲಿ ಕೂರುವ ಬದಲು ಕ್ರಿಯಾಶೀಲರಾಗಿ ಕೆಲಸ ಮಾಡಿ ಎಂದು ಹೇಳಿದ್ರು.

ಜಿಂದಾಲ್​ ಕಂಪನಿಗೆ ಜಮೀನು ಕೊಡಬೇಕು ಅಂತಾ ಸಿಎಂ ಸ್ಥಾನದಲ್ಲಿ ಕೂರಬೇಡಿ. ನಿಮಗೆ ಕೆಲಸ ಮಾಡಲು ಸಾಧ್ಯವಾಗ್ತಿಲ್ಲ ಅನ್ನೋದಾದ್ರೆ ದಯಮಾಡಿ ಸಿಎಂ ಸ್ಥಾನದಿಂದ ಕೆಳಗೆ ಇಳಿಯಿರಿ. ವಿಜಯಪುರ ನಗರಕ್ಕೆ ಸರ್ಕಾರ ಸರಿಯಾಗಿ ಲಸಿಕೆಗಳನ್ನ ಪೂರೈಕೆ ಮಾಡುತ್ತಿಲ್ಲ. ರಾಜ್ಯದ ಎಲ್ಲಾ ವರ್ಗಗಳಿಗೆ ಸರ್ಕಾರ ಸಮನಾದ ಪರಿಹಾರವನ್ನ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.

ಇನ್ನು ವಿಶೇಷ ಆರ್ಥಿಕ ಪ್ಯಾಕೇಜ್​ ವಿಚಾರವಾಗಿಯೂ ಮಾತನಾಡಿದ ಯತ್ನಾಳ್​, ಲಾಕ್​ಡೌನ್​ ಘೋಷಣೆಗೂ ಮುನ್ನವೇ ಪರಿಹಾರ ಘೋಷಣೆ ಮಾಡಬೇಕಿತ್ತು. ಕೊರೊನಾ ಹೆಚ್ಚಾದರೆ ಸಿಎಂ ಖುರ್ಚಿಯಲ್ಲೇ ಉಳಿಯಬಹುದು ಎಂಬುದು ಬಿಎಸ್​​ವೈ ಯೋಚನೆ ಇರಬಹುದು ಎಂದು ಗುಡುಗಿದ್ರು.

ಲಸಿಕೆ ಅಭಾವದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಯತ್ನಾಳ್​, ಕಾಂಗ್ರೆಸ್​ನವರು ಹಾಗೂ ಬುದ್ಧಿ ಜೀವಿಗಳು ಮೊದಲು ಈ ಲಸಿಕೆಯನ್ನ ವಿರೋಧ ಮಾಡಿದ್ರು. ಇದು ಮೋದಿ ಲಸಿಕೆ ಅಂತಾ ಅಪಪ್ರಚಾರ ಮಾಡಿದ್ರು. ಹೀಗಾಗಿ ಲಕ್ಷಾಂತರ ಲಸಿಕೆ ಹಾಳಾಗಲು ಕಾಂಗ್ರೆಸ್​ನವರು ಕಾರಣ ಎಂದು ಕಿಡಿಕಾರಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...