alex Certify ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ರೈಲಿನ ಮೂಲಕ ಬಂತು ವೈದ್ಯಕೀಯ ಆಮ್ಲಜನಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ರೈಲಿನ ಮೂಲಕ ಬಂತು ವೈದ್ಯಕೀಯ ಆಮ್ಲಜನಕ

ಆಕ್ಸಿಜನ್​​ ಅಭಾವದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ. ಇದೇ ಮೊದಲ ಬಾರಿಗೆ ರಾಜ್ಯಕ್ಕೆ 6 ಆಕ್ಸಿಜನ್​ ಕಂಟೇನರ್​​ಗಳು ರೈಲಿನ ಮೂಲಕ ಜಮ್​ಶೆಡ್​​ಪುರದಿಂದ ಬಂದಿವೆ.

ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಹೊರಟಿದ್ದ ರೈಲು ಇಂದು ಬೆಳಗ್ಗೆ ಬೆಂಗಳೂರಿಗೆ ಬಂದು ತಲುಪಿದೆ. ಈ ಮೂಲಕ ರೈಲ್ವೆ ಇಲಾಖೆ ಇದೇ ಮೊದಲ ಬಾರಿಗೆ ಗ್ರೀನ್​ ಕಾರಿಡಾರ್​​ನಲ್ಲಿ ಬೆಂಗಳೂರಿಗೆ ಆಕ್ಸಿಜನ್​ ಪೂರೈಕೆ ಮಾಡಿದಂತಾಗಿದೆ. ಕಂಟೇನರ್​​ ಕಾರ್ಪೋರೇಷನ್​ ಆಫ್​ ಇಂಡಿಯಾದ ಡಿಪೋಗೆ ಬಂದ ಆಕ್ಸಿಜನ್​ಗಳನ್ನ ಸದ್ಯದಲ್ಲೇ ರಾಜ್ಯದ ವಿವಿಧೆಡೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇವಲ 30ಗಂಟೆಗಳ ಅವಧಿಯಲ್ಲಿ ಈ ಆಕ್ಸಿಜನ್​ ಕಂಟೈನರ್​ಗಳು ಬೆಂಗಳೂರಿಗೆ ಬಂದು ತಲುಪಿದ್ದು ಕೊರೊನಾ 2ನೇ ಅಲೆ ವಿರುದ್ಧ ಹೋರಾಡುತ್ತಿರುವ ರಾಜ್ಯಕ್ಕೆ ಇದೊಂದು ಮುನ್ನಡೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...