ಮಂಗಳೂರು: ಒಂದೇ ಕಡೆ ಕೆಲಸ ಮಾಡುತ್ತಿದ್ದ ಯುವತಿಯನ್ನು ಕಾಡಿಬೇಡಿ ಪ್ರೀತಿಸಿದ ಯುವಕನೊಬ್ಬ ವಂಚಿಸಿ ಬೇರೆ ಮದುವೆಯಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ, ಸಂಬಂಧಿಕರ ನೆರವಿನಿಂದ ಪೊಲೀಸರಿಗೆ ಮತ್ತು ಜಮಾತ್ ಗೆ ದೂರು ನೀಡಿದ್ದಾಳೆ.
ಮಂಗಳೂರಿನ ನವಾಜ್ ಎಂಬಾತ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಅಲ್ಲೇ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಯನ್ನು ನಾಲ್ಕು ತಿಂಗಳಿಂದ ಪ್ರೀತಿಸಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಈ ವಿಚಾರ ಗೊತ್ತಾದ ಯುವತಿಯ ಮನೆಯವರು ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿದ್ದು ಆಗಸ್ಟ್ 24ರಂದು ಮದುವೆ ನಿಗದಿಯಾಗಿದೆ.
ಯುವತಿ ಮನೆಯವರಿಂದ 60 ಸಾವಿರ ರೂ. ಪಡೆದುಕೊಂಡಿದ್ದ ನವಾಜ್, ಆಕರಯ ಮನೆಯವರಿಗೆ ಗೊತ್ತಾಗದಂತೆ ಬೆಳ್ತಂಗಡಿ ಮುಂಡಾಜೆ ಮೂಲದ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಈ ವಿಷಯ ತಿಳಿದ ಯುವತಿ, ಸಂಬಂಧಿಕರ ನೆರವಿನಿಂದ ಪಾಂಡೇಶ್ವರ, ಬಂಟ್ವಾಳ ಠಾಣೆ ಪೊಲೀಸರಿಗೆ ದೂರು ನೀಡಿದ್ದಲ್ಲದೇ ಮದುವೆಯನ್ನು ಅರ್ಹಗೊಳಿಸಬಾರದೆಂದು ಜಮಾತ್ ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.