ಮೈಸೂರು: ಎರಡು ವರ್ಷಗಳಿಂದ ಪ್ರೀತಿಸಿದ ಯುವಕ, ಯುವತಿ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಹುಣಸೂರು ತಾಲ್ಲೂಕಿನ ಕಲ್ಕುಣಿಕೆ ಗ್ರಾಮದ ಕೇಶವ್ ಮತ್ತು ಅನುಷಾ ಪ್ರೀತಿಸಿದ್ದು ಯುವತಿಯ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆ. ಯುವಕನ ಮನೆಯವರು ಮದುವೆಗೆ ಒಪ್ಪಿದ್ದಾರೆ. ಆದರೆ ಮದುವೆಗೆ ವಿರೋಧ ವ್ಯಕ್ತವಾಗಿದ್ದರಿಂದ ಇಬ್ಬರು ರಾಮಪಟ್ಟಣ ಗ್ರಾಮದ ಮಹದೇಶ್ವರ ದೇವಾಲಯದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ಗ್ರಾಮದ ಕೆಲವರಿಂದ ತಮಗೆ ತೊಂದರೆಯಾಗಿದೆ ಎಂದು ದೂರಿರುವ ನವಜೋಡಿ ರಕ್ಷಣೆಗಾಗಿ ಹುಣಸೂರು ಠಾಣೆ ಪೊಲೀಸರು ಮೊರೆ ಹೋಗಿದ್ದಾರೆ.