alex Certify ಊರಿನ ಹುಡುಗ ಮನೆಗೆ ಬಂದಾಗ ದಾರಿ ತಪ್ಪಿದ್ಲು ಪ್ರೀತಿಸಿ ಮದುವೆಯಾದ ಪತ್ನಿ, ಮಂಚದ ಕೆಳಗೆ ಅವಿತು ಪ್ರಿಯಕರನ ಕೊಂದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊರಿನ ಹುಡುಗ ಮನೆಗೆ ಬಂದಾಗ ದಾರಿ ತಪ್ಪಿದ್ಲು ಪ್ರೀತಿಸಿ ಮದುವೆಯಾದ ಪತ್ನಿ, ಮಂಚದ ಕೆಳಗೆ ಅವಿತು ಪ್ರಿಯಕರನ ಕೊಂದ ಪತಿ

ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ವ್ಯಕ್ತಿಯೊಬ್ಬ ಪ್ರಿಯಕರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಚಿಕ್ಕಮಗಳೂರು ಮೂಲದ ಶಿವಕುಮಾರ್(27) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ನೆಲಮಂಗಲದ ಭರತ್ ಕುಮಾರ್ ಕೊಲೆ ಆರೋಪಿಯಾಗಿದ್ದು, ಆತನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಬೆಳಿಗ್ಗೆ ಆಂಧ್ರ ಹಳ್ಳಿಯಲ್ಲಿ ಘಟನೆ ನಡೆದಿದೆ.

ನೆಲಮಂಗಲದ ಭರತ್ ಕುಮಾರ್ ಮತ್ತು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಹೊಸಹಳ್ಳಿಯ ವಿನುತಾ 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿನುತಾ ಊರಿನವನೇ ಆಗಿದ್ದ ಶಿವಕುಮಾರ್ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದು ಇವರ ಮನೆಯಲ್ಲಿ ಉಳಿದುಕೊಂಡಿದ್ದ. ಆತನೊಂದಿಗೆ ಸಲುಗೆಯಿಂದ ಇದ್ದ ವಿನುತಾ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಚಾರ ಗೊತ್ತಾದಾಗ ಭರತ್ ಕುಮಾರ್ ಜಗಳವಾಡಿದ್ದಾನೆ.

ನಂತರದಲ್ಲಿ ಮನೆಬಿಟ್ಟು ಹೋದ ವಿನುತಾ ಆಂಧ್ರ ಹಳ್ಳಿಯಲ್ಲಿ ಶಿವಕುಮಾರ್ ಜೊತೆಗೆ ವಾಸವಾಗಿದ್ದಾಳೆ. ಭರತ್ ಕುಮಾರ್ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಒಂಟಿಯಾಗಿ ವಾಸವಾಗಿದ್ದ. ಶಿವಕುಮಾರ್ ನಿಂದಲೇ ತನ್ನ ಸಂಸಾರ ಹಾಳಾಗಿದೆ ಎಂದು ಆತನನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

ಆನ್ಲೈನ್ನಲ್ಲಿ ಚಾಕು ತರಿಸಿಕೊಂಡಿದ್ದಾನೆ. ಮಾರ್ಚ್ 24 ರಂದು ತನ್ನ ಸ್ನೇಹಿತನನ್ನು ಡ್ರಾಪ್ ಮಾಡಲು ಆಂದ್ರ ಹಳ್ಳಿಗೆ ಹೋಗಿದ್ದ ಭರತ್ ಕುಮಾರ್ ಮನೆಗೆ ಚಿಲಕ ಹಾಕಿಕೊಂಡು ವಿನುತಾ ಹೊರಗೆ ಹೋಗಿದ್ದನ್ನು ಗಮನಿಸಿ ಮನೆಯೊಳಗೆ ಸೇರಿಕೊಂಡಿದ್ದಾನೆ. ಗಂಟೆಗಳ ಕಾಲ ಮಂಚದ ಕೆಳಗೆ ಅವಿತು ಕುಳಿತುಕೊಂಡಿದ್ದಾನೆ.

ರಾತ್ರಿ ಶಿವಕುಮಾರ್ ಮನೆಗೆ ಬಂದಿದ್ದು, ವಿನುತಾ ಜೊತೆಗೆ ಊಟ ಮಾಡಿದ್ದಾನೆ. ವಿನುತಾ ಬಾತ್ ರೂಮ್ ಗೆ ತೆರಳುತ್ತಿದ್ದಂತೆ ಚಿಲಕ ಹಾಕಿದ ಭರತ್ ಉಸಿರುಗಟ್ಟಿಸಿ ಶಿವಕುಮಾರ್ ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಕೊನೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಪತ್ನಿಯನ್ನು ಕರೆದುಕೊಂಡು ಹೋಗಿ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...