ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧ ಸಡಿಲಗೊಳಿಸಲಾಗಿದ್ದು ಇಂದಿನಿಂದ ಕೈಗಾರಿಕೆ, ರಸ್ತೆ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಕ್ಷೇತ್ರಗಳು ಪುನರಾರಂಭವಾಗಲಿದೆ.
ಆಸ್ಪತ್ರೆ, ವೈದ್ಯಕೀಯ ಸೇವೆ, ಔಷಧ ಕ್ಷೇತ್ರ, ಪಶುವೈದ್ಯಕೀಯ, ಕೃಷಿ, ಮೀನುಗಾರಿಕೆ, ಪ್ಲಾಂಟೇಶನ್ ಚಟುವಟಿಕೆಗಳು ಗೋಶಾಲೆಗಳು ಆರಂಭವಾಗಲಿವೆ.
ಅಂಚೆ, ಬ್ಯಾಂಕಿಂಗ್, ಕೊರಿಯರ್ ಸೇವೆ, ಸರ್ಕಾರಿ ಕಾಲ್ ಸೆಂಟರ್, ನರೇಗಾ ಯೋಜನೆ, ರಸ್ತೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣ ಕಾರ್ಯಗಳು ಆರಂಭವಾಗಲಿವೆ. ರೈಲು ನಿರ್ಮಾಣ ಯೋಜನೆ ಹೊರಗಡೆಯಿಂದ ಕಾರ್ಮಿಕರನ್ನು ಕರೆತರದೆ ಆರಂಭವಾಗಲಿದೆ.
ತುರ್ತು ಸೇವೆಗಳಿಗಾಗಿ ಖಾಸಗಿ ವಾಹನಗಳಿಗೆ ಪಾಸ್ ಇದ್ದರೆ ಮಾತ್ರ ಅವಕಾಶ ನೀಡಲಾಗುತ್ತದೆ. ಇಟ್ಟಿಗೆ ಸರಬರಾಜು, ಸಿಮೆಂಟ್, ಜಲ್ಲಿ, ಸ್ಟೀಲ್ ಸರಬರಾಜಿಗೆ ಅನುಮತಿ ನೀಡಲಾಗಿದೆ. ಹೆದ್ದಾರಿಗಳಲ್ಲಿ 20 ಕಿಲೋ ಮೀಟರ್ ಅಂತರದಲ್ಲಿ ರಿಪೇರಿ ಅಂಗಡಿಗಳಿಗೆ, ಡಾಬಾಗಳಿಗೆ ಅನುಮತಿ ನೀಡಲಾಗಿದೆ.