alex Certify ಮಾರ್ಚ್ 23 ರಿಂದ ಅಜ್ಞಾತವಾಸದಲ್ಲಿದ್ದವರಿಗೆ ಶುಭ ಸುದ್ದಿ, ಇಂದಿನಿಂದ ಹೊಸ ಜೀವನ ಆರಂಭ: ಯಾವುದಕ್ಕೆ ಅವಕಾಶವಿಲ್ಲ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ 23 ರಿಂದ ಅಜ್ಞಾತವಾಸದಲ್ಲಿದ್ದವರಿಗೆ ಶುಭ ಸುದ್ದಿ, ಇಂದಿನಿಂದ ಹೊಸ ಜೀವನ ಆರಂಭ: ಯಾವುದಕ್ಕೆ ಅವಕಾಶವಿಲ್ಲ…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯಾದ್ಯಂತ ಲಾಕ್ ಡೌನ್ ಬಹುತೇಕ ಸಡಿಲಗೊಂಡಿದ್ದು ಇಂದಿನಿಂದ ಹೊಸ ಜೀವನ ಆರಂಭವಾಗಲಿದೆ.

ಮಾರ್ಚ್ 23 ರಿಂದ ಗೃಹಬಂಧನದಲ್ಲಿದ್ದ ಜನರಿಗೆ ಖುಷಿ ಸುದ್ದಿ ಇದಾಗಿದೆ. ಬಸ್, ಆಟೋ, ಸೇರಿದಂತೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವೈಯಕ್ತಿಕ ವಾಹನಗಳಲ್ಲಿ ತೆರಳಲು ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಇನ್ನುಳಿದಂತೆ ಲಾಕ್ಡೌನ್ ಸಂದರ್ಭದಲ್ಲಿ ಇದ್ದ ಕೆಲವು ನಿರ್ಬಂಧಗಳು ಮುಂದುವರೆದಿವೆ. ಚಿತ್ರಮಂದಿರ, ಮಾಲ್ ಬಂದ್ ಆಗಲಿವೆ. ಎಸಿ ಬಸ್ ಸೇವೆ ಇರುವುದಿಲ್ಲ. ಹೊರರಾಜ್ಯಕ್ಕೆ ರೈಲು ಸಂಚಾರ ಇರುವುದಿಲ್ಲ. ಶಾಲಾ-ಕಾಲೇಜು ಶೈಕ್ಷಣಿಕ ಸಂಸ್ಥೆಗಳು ತೆರೆಯುವಂತಿಲ್ಲ. ಹೋಟೆಲ್ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶವಿದ್ದು, ದೇವಾಲಯ ಪ್ರಾರ್ಥನಾ ಮಂದಿರಗಳಿಗೆ ಪ್ರವೇಶ ಇರುವುದಿಲ್ಲ. ಕ್ರೀಡಾಂಗಣ ತರಬೇತಿ ಸಂಸ್ಥೆಗಳಲ್ಲಿ ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ. ಪಾರ್ಕ್ ಗಳಲ್ಲಿ ಬೆಳಗ್ಗೆ 7ರಿಂದ 9 ಗಂಟೆ, ಸಂಜೆ 5 ರಿಂದ 7 ಗಂಟೆಯವರೆಗೆ ಅವಕಾಶ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...