alex Certify ಮಾನವೀಯತೆ ಮರೆತ ಬ್ಯಾಂಕ್ ಸಿಬ್ಬಂದಿ, 15 ಕಿಲೋಮೀಟರ್ ಓಡಿ 3.46 ರೂ. ಸಾಲ ಕಟ್ಟಿದ ರೈತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಮರೆತ ಬ್ಯಾಂಕ್ ಸಿಬ್ಬಂದಿ, 15 ಕಿಲೋಮೀಟರ್ ಓಡಿ 3.46 ರೂ. ಸಾಲ ಕಟ್ಟಿದ ರೈತ

ರೈತರೊಬ್ಬರು ಬಾಕಿ ಉಳಿದಿದ್ದ 3.46 ರೂಪಾಯಿ ಸಾಲ ಕಟ್ಟಲು ಬರೋಬ್ಬರಿ 15 ಕಿಲೋಮೀಟರ್ ನಡೆದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಕೆನರಾ ಬ್ಯಾಂಕ್ ಶಾಖೆ ಸಿಬ್ಬಂದಿ ನಿಮ್ಮ ಸಾಲ ಬಾಕಿ ಇದ್ದು ತಕ್ಷಣ ಬನ್ನಿ ಎಂದು ಹೇಳಿದ್ದಾರೆ. ನಿಟ್ಟೂರು ಸಮೀಪದ ಬರುವೆ ಗ್ರಾಮದ ಲಕ್ಷ್ಮೀನಾರಾಯಣ ಬಸ್ ಇಲ್ಲದ ಕಾರಣ ನಡೆದುಕೊಂಡೇ ಬ್ಯಾಂಕ್ ತಲುಪಿದ್ದಾರೆ.

ಅಲ್ಲಿಗೆ ಹೋದರೆ 3.46 ರೂಪಾಯಿ ಸಾಲ ಬಾಕಿ ಇದೆ. ಅದನ್ನು ಪಾವತಿಸಿ ಎಂದಿದ್ದು ಹಣ ಪಾವತಿಸಿದ ಲಕ್ಷ್ಮೀನಾರಾಯಣ ಮನೆಗೆ ಮರಳಿದ್ದಾರೆ. ಕೆನರಾ ಬ್ಯಾಂಕ್ ನಲ್ಲಿ ಅವರು 35 ಸಾವಿರ ರೂ. ಕೃಷಿ ಸಾಲ ಪಡೆದಿದ್ದು 32 ಸಾವಿರ ರೂಪಾಯಿ ಮನ್ನಾ ಆಗಿತ್ತು. ಬಾಕಿ ಉಳಿದ 3 ಸಾವಿರ ರೂಪಾಯಿಯನ್ನು ಕೆಲವು ತಿಂಗಳ ಹಿಂದೆ ಬಡ್ಡಿಸಮೇತ ಪಾವತಿಸಿದ್ದು ಬ್ಯಾಂಕ್ ನಿಂದ ಸಾಲ ಬಾಕಿ ಇದೆ ಬನ್ನಿ ಎಂದು ಕರೆ ಮಾಡಲಾಗಿದೆ. ಕೆಲಸ ಬಿಟ್ಟು ಓಡಿ ಬ್ಯಾಂಕ್ ತಲುಪಿದ ಲಕ್ಷ್ಮೀನಾರಾಯಣ ಬಾಕಿ ಉಳಿದಿದ್ದ 3.46 ರೂಪಾಯಿ ಸಾಲ ತೀರಿಸಿ ಮನೆಗೆ ಮರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...