alex Certify ಹೊನ್ನಾಳಿಯಲ್ಲಿ ಪ್ರಾಣುವಾಯು ಅಭಾವ: ಸಮಯ ಪ್ರಜ್ಞೆ ಮೆರೆದ ಶಾಸಕ ರೇಣುಕಾಚಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊನ್ನಾಳಿಯಲ್ಲಿ ಪ್ರಾಣುವಾಯು ಅಭಾವ: ಸಮಯ ಪ್ರಜ್ಞೆ ಮೆರೆದ ಶಾಸಕ ರೇಣುಕಾಚಾರ್ಯ

ಆಕ್ಸಿಜನ್​ ಕೊರತೆಯಿಂದಾಗಿ ಸೋಂಕಿತರು ಪ್ರಾಣಬಿಟ್ಟ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿರುವ ಬೆನ್ನಲ್ಲೇ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಇಂತಹದ್ದೊಂದು ಅನಾಹುತ ಶಾಸಕರ ಸಮಯಪ್ರಜ್ಞೆಯಿಂದ ತಪ್ಪಿದೆ.

ಆಸ್ಪತ್ರೆಯಲ್ಲಿ ಆಕ್ಸಿಜನ್​ ಸಿಲಿಂಡರ್ ಖಾಲಿಯಾಗಲು ಇನ್ನೇನು ಕೇವಲ 2 ಗಂಟೆ ಮಾತ್ರ ಬಾಕಿ ಉಳಿದಿದೆ ಎನ್ನುವಾಗ ವೈದ್ಯಾಧಿಕಾರಿ ಡಾ. ಚಂದ್ರಪ್ಪ ಮಾಹಿತಿ ನೀಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಧಾವಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ ವೈದ್ಯಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು.

ಸುಧಾಕರ್ ಅಯೋಗ್ಯ ಮಂತ್ರಿ: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್

ಆಸ್ಪತ್ರೆಯಲ್ಲಿ 40 ಮಂದಿ ಸೋಂಕಿತರು ಆಕ್ಸಿಜನ್​ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆಕ್ಸಿಜನ್​ ಸರಬರಾಜಿನ ಬಗ್ಗೆ ಮೊದಲೇ ಕಾಳಜಿ ವಹಿಸಬೇಕು. ಈ ರೀತಿ ಕೊನೆ ಘಳಿಗೆಯಲ್ಲಿ ತಿಳಿಸಿದ್ರೆ ಏನು ಮಾಡೋದು ಅಂತಾ ವೈದ್ಯಾಧಿಕಾರಿಗೆ ಕ್ಲಾಸ್​ ತೆಗೆದುಕೊಂಡ್ರು.

ಬಳಿಕ ಶಾಸಕ ರೇಣುಕಾಚಾರ್ಯ ಪರಿಸ್ಥಿತಿಯ ವಿವರಣೆ ನೀಡುವ ಮೂಲಕ ಜಗಳೂರಿಗೆ ತೆರಳುತ್ತಿದ್ದ ಸಿಲಿಂಡರ್​ಗಳನ್ನ ಪೊಲೀಸ್​ ಎಸ್ಕಾರ್ಟ್​ ಮೂಲಕ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ತರಿಸಿಕೊಂಡು 40 ಮಂದಿ ಸೋಂಕಿತರ ಪ್ರಾಣ ಉಳಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...