alex Certify ರೈತ ಮಹಿಳೆಗೆ ರಾಸ್ಕಲ್, ಮುಚ್ಚು ಬಾಯಿ ಎಂದು ಗದರಿದ ಸಚಿವ ಮಾಧುಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತ ಮಹಿಳೆಗೆ ರಾಸ್ಕಲ್, ಮುಚ್ಚು ಬಾಯಿ ಎಂದು ಗದರಿದ ಸಚಿವ ಮಾಧುಸ್ವಾಮಿ

ತಮ್ಮ ಹೇಳಿಕೆಗಳಿಂದ ಆಗಾಗ ವಿವಾದಕ್ಕೆ ಸಿಲುಕುವ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಈಗ ರೈತ ಮಹಿಳೆಯೊಬ್ಬರಿಗೆ ಹೇ ರಾಸ್ಕಲ್, ಮುಚ್ಚು ಬಾಯಿ ಎಂದು ಹೇಳುವ ಮೂಲಕ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಬುಧವಾರದಂದು ಸಚಿವ ಮಾಧುಸ್ವಾಮಿ ಕೆ.ಸಿ. ವ್ಯಾಲಿ ಯೋಜನೆ ವ್ಯಾಪ್ತಿಯಲ್ಲಿರುವ ಕೋಲಾರ ತಾಲೂಕಿನ ಎಸ್. ಅಗ್ರಹಾರ ಗ್ರಾಮದ ಕೆರೆ ಪರಿಶೀಲಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೆರೆಗಳ ಒತ್ತುವರಿ ತೆರವು ಮಾಡುವಂತೆ ರೈತ ಮಹಿಳೆಯರು ಮನವಿ ಸಲ್ಲಿಸಲು ಮುಂದಾಗಿದ್ದರು.

ಈ ಸಂದರ್ಭದಲ್ಲಿ ರೈತ ಮಹಿಳೆಯರು ಚರ್ಚೆಗೆ ಮುಂದಾಗಿದ್ದು, ಆಗ ಏಕಾಏಕಿ ಸಿಟ್ಟಿಗೆದ್ದ ಮಾಧುಸ್ವಾಮಿ, ಕಟು ಮಾತುಗಳನ್ನಾಡಿದರು. ಆಗ ಅವಾಕ್ಕಾದ ರೈತ ಮಹಿಳೆ ಇದೇನು ಹೀಗೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದ್ದು ಬಳಿಕ ಮಧ್ಯ ಪ್ರವೇಶಿಸಿದ ಪೊಲೀಸರು ಮಹಿಳೆಯನ್ನು ಕರೆದೊಯ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...