alex Certify ನಾನು ಸೋಂಕಿನಿಂದ ಸತ್ತರೆ ರಾಜಕಾರಣಿಗಳೇ ಕಾರಣ: ನಿರ್ದೇಶಕ ಗುರುಪ್ರಸಾದ್​​ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಸೋಂಕಿನಿಂದ ಸತ್ತರೆ ರಾಜಕಾರಣಿಗಳೇ ಕಾರಣ: ನಿರ್ದೇಶಕ ಗುರುಪ್ರಸಾದ್​​ ಆಕ್ರೋಶ

ಸ್ಯಾಂಡಲ್​ವುಡ್​​ನ ‘ಮಠ’ ಸಿನಿಮಾದ ಮೂಲಕ ಪ್ರಖ್ಯಾತಿ ಗಳಿಸಿದ್ದ ನಿರ್ದೇಶಕ ಗುರುಪ್ರಸಾದ್​ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಸಂಬಂಧ ಮಾತನಾಡಿರುವ ಗುರುಪ್ರಸಾದ್​​ ಡಿಕೆಶಿ, ಸಿಎಂ ಬಿಎಸ್​​ವೈ, ಮಾಜಿ ಸಿಎಂ ಹೆಚ್​ಡಿಕೆ ಸೇರಿದಂತೆ ಇನ್ನೂ ಹಲವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ಸೋಶಿಯಲ್​ ಮೀಡಿಯಾ ಮೂಲಕ ಸರ್ಕಾರಕ್ಕೆ ಡೆತ್​ ನೋಟ್​ ಬರೆಯುತ್ತಿದ್ದೇನೆ. ನನ್ನ ಮನೆಗೆ ನಮ್ಮ ಮನೆಯವರಿಗೆ ಕೊರೊನಾ ತಂದ ಯಡಿಯೂರಪ್ಪ, ವಿಜಯೇಂದ್ರ ಇವರಿಗೆಲ್ಲ ಧನ್ಯವಾದ. ನನ್ನ ಸಾವಿಗೆ ಚೀನಾದಿಂದ ಕೊರೊನಾ ತಂದು ನೀವೆಲ್ಲ ಸಾವಿಗೆ ಮುನ್ನುಡಿ ಬರೆದಿದ್ದೀರಾ. ನಾನು ಸತ್ತ ಬಳಿಕವೂ ನನ್ನ ಶಾಪ ನಿಮಗೆಲ್ಲ ತಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಡಾ. ಸುಧಾಕರ್,​​ ಬೆಂಗಳೂರಲ್ಲಿ ಒಂದು ಲಕ್ಷ ವಾರ್​ಫೇರ್​ ಟೆಂಟ್​ ಹಾಕಿಸಿ. ಒಂದೊಂದು ರೂಪಾಯಿ ದುಡಿಯೋಕೆ ಜನ ಕಷ್ಟ ಪಡ್ತಿದ್ದಾರೆ. ಒಂದೂವರೆ ವರ್ಷ ಸಮಯ ತೆಗೆದುಕೊಂಡು ಪ್ರತಿ ಮನೆಗೆ ವೈರಸ್​ ಕಳಿಸಿಕೊಟ್ಟ ಬಿಜೆಪಿ ಸರ್ಕಾರಕ್ಕೆ ಧನ್ಯವಾದ . ಚಿತ್ರರಂಗದ ಅನೇಕರನ್ನ ನೀವು ಸಾಯಿಸಿದ್ದೀರಾ. ನಾಳೆ ನಾನೂ ಸಾಯಬಹುದು. ನಿಮಗೆಲ್ಲ ನನ್ನ ಧಿಕ್ಕಾರವಿದೆ ಎಂದು ಕಿಡಿಕಾರಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...