ಬೆಂಗಳೂರಿನ ತಲಕಾವೇರಿ ಲೇಔಟ್ ನಲ್ಲಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬ ತಾನು ಮುಖ್ಯಮಂತ್ರಿ ಸಂಬಂಧಿ ಎಂದು ಹೇಳಿ ಧಮಕಿ ಹಾಕಿದ್ದಾನೆ.
ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿ ಅಶೋಕ ಶೆಟ್ಟಿ ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.
ತಲಕಾವೇರಿ ಲೇಔಟ್ ನ ಚಂದ್ರಮೌಳೇಶ್ವರ ದೇವಾಲಯದ ಸಮೀಪ ಯುವತಿಯ ಪೋಷಕರು ಹಾಲಿನ ಬೂತ್ ನಡೆಸುತ್ತಿದ್ದಾರೆ. ಮೇ 21 ರಂದು ಬೆಳಗ್ಗೆ ಯುವತಿ ಇದ್ದ ವೇಳೆ ಹಾಲು ಖರೀದಿಗೆ ಬಂದಿದ್ದ ಅಶೋಕ ಶೆಟ್ಟಿ ಹಾಲಿನ ಹಣ ಕೊಡದೆ ಆಕೆಯ ಕೈ ಹಿಡಿದೆಳೆದು ಅನುಚಿತವಾಗಿ ವರ್ತಿಸಿದ್ದಾನೆ.
ನಾನು ಮುಖ್ಯಮಂತ್ರಿಗೆ ಹತ್ತಿರದ ಸಂಬಂಧಿಯಾಗಿದ್ದು, ಹಣ ಕೇಳಿದರೆ ಜೈಲಿಗೆ ಹಾಕಿಸುತ್ತೇನೆ ಎಂದೆಲ್ಲ ಬೆದರಿಕೆ ಹಾಕಿದ್ದು, ಈ ಕುರಿತಾಗಿ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಜೀವ ಬೆದರಿಕೆ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.