ಕೋಲಾರ: ಪ್ರತಿ ಸಲವೂ ನಿರಾಸೆಯಾಗುತ್ತಿದ್ದ ಮದ್ಯಪ್ರಿಯರಿಗೆ ಸಿಹಿ ಸುದ್ದಿ ಸಿಗುತ್ತದೆಯೇ ಇಲ್ಲವೇ ಎನ್ನುವುದು ಭಾರೀ ಚರ್ಚೆಯಾಗ್ತಿದೆ.
ಪ್ರತಿದಿನ ಭಾರೀ ಜನ ಕರೆ ಮಾಡಿ ಮದ್ಯದಂಗಡಿಗಳನ್ನು ಯಾವಾಗ ತೆಗೆಯುತ್ತೀರಿ ಎಂದು ಕೇಳುತ್ತಾರೆ. ಇದೆ ನನಗೆ ತಲೆನೋವಾಗಿ ಪರಿಣಮಿಸಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ.
ಮದ್ಯದಂಗಡಿ ಯಾವಾಗ ತೆಗೆಯುತ್ತೀರಿ ಎಂದು ಜನ ಕೇಳುತ್ತಿರುವುದರಿಂದ ತಲೆ ನೋವಾಗಿದೆ. ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಮದ್ಯದಂಗಡಿ ತೆರೆಯುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಲಾಕ್ಡೌನ್ ಜಾರಿ ಮಾಡಿದ ಕಾರಣ ಮದ್ಯದಂಗಡಿಗಳು ಬಂದ್ ಆಗಿದ್ದು ಮದ್ಯ ಸೇವನೆ ಮಾಡುವವರು ಯಾವಾಗ ವೈನ್ ಶಾಪ್ ಓಪನ್ ಆಗುತ್ತವೆ ಎನ್ನುವುದನ್ನೇ ಕಾಯತೊಡಗಿದ್ದಾರೆ. ಆದರೆ ಗ್ರೀನ್ ಜೋನ್ ಗಳಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಕೊಂಚ ಸಡಿಲ ಮಾಡಿದ್ದರೂ ಮದ್ಯದಂಗಡಿಗಳಿಗೆ ಮಾತ್ರ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಆಸೆಯಿಂದ ಕಾಯುತ್ತಿದ್ದ ಮದ್ಯ ಪ್ರಿಯರಿಗೆ ಮತ್ತೆ ಮತ್ತೆ ನಿರಾಸೆಯಾಗುತ್ತಿದೆ. ಈಗಂತೂ ಮೇ 17 ರ ವರೆಗೂ ಕಾಯಬೇಕಿದೆ.