ಮೈಸೂರು: ಕ್ಯಾತಮಾರನಹಳ್ಳಿಯಲ್ಲಿ ಹುಡುಗಿಯರ ವಿಚಾರಕ್ಕೆ ಸಂಬಂಧಿಸಿದಂತೆ 22 ವರ್ಷದ ಯುವಕನನ್ನು ಕೊಲೆ ಮಾಡಲಾಗಿದೆ.
ಅಭಿಷೇಕ್ ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ಫಾನ್ ಮತ್ತು ಮಹೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 4 ರಂದು ಸ್ನೇಹಿತರು ಸೇರಿ ಎಣ್ಣೆ ಪಾರ್ಟಿ ಮಾಡಿದ್ದು ಈ ವೇಳೆ ಮಧು ಮತ್ತು ಕಿರಣ್ ಎಂಬುವರು ಹುಡುಗಿಯ ವಿಚಾರಕ್ಕೆ ಗಲಾಟೆ ಮಾಡಿ ಸತೀಶ್ ಎಂಬುವನನ್ನು ಕೊಲೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿರಣ್ ಮತ್ತು ಮಧು ಅವರನ್ನು ಬಂಧಿಸಿದ್ದರು.
ಕಿರಣ್ ಸಹೋದರನಾದ ಅಭಿಷೇಕ್ ನನ್ನು ಫೋನ್ ಮಾಡಿ ಕರೆಸಿಕೊಂಡ ಮೃತ ಸತೀಶ್ ಸ್ನೇಹಿತರಾದ ಇರ್ಫಾನ್ ಮತ್ತು ಮಹೇಶ್ ಕೊಲೆ ಮಾಡಿದ್ದಾರೆ. ಸ್ನೇಹಿತ ಸತೀಶ್ ಸಾವಿಗೆ ಪ್ರತೀಕಾರವಾಗಿ ಆರೋಪಿ ಕಿರಣ್ ಸಹೋದರ ಅಭಿಷೇಕ್ ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.