alex Certify BIG NEWS: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಹತ್ಯೆಗೆ ಬಿಗ್ ಟ್ವಿಸ್ಟ್ – ಸಿದ್ಧಾರ್ಥ್ ಮಲತಾಯಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಹತ್ಯೆಗೆ ಬಿಗ್ ಟ್ವಿಸ್ಟ್ – ಸಿದ್ಧಾರ್ಥ್ ಮಲತಾಯಿ ಅರೆಸ್ಟ್

ಬೆಂಗಳೂರು: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಅಪಹರಣ ಹಾಗೂ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿದ್ಧಾರ್ಥ್ ಹತ್ಯೆ ಹಿಂದೆ ಭೂ ವಿವಾದ ಹಾಗೂ ಮಲತಾಯಿ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ.

ಸಿದ್ಧಾರ್ಥ್ ಹತ್ಯೆಗೆ ಭೂ ವಿವಾದವೇ ಪ್ರಮುಖ ಕಾರಣ ಎನ್ನಲಾಗಿದ್ದು, ಮಲತಾಯಿ ಇಂದು ಚೌಹಾಣ್ ಮೇಲೆ ಅನುಮಾನ ಮೂಡಿದೆ. ಸಿದ್ಧಾರ್ಥ್ ಮಲತಾಯಿಯೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಸಿದ್ಧಾರ್ಥ್ ಮಲತಾಯಿ ಇಂದು ಚೌಹಾಣ್ ಅವರನ್ನು ಬಂಧಿಸಿದ್ದಾರೆ.

ಹೆರಿಗೆಯಾದ ಮೂರು ತಿಂಗಳ ಬಳಿಕ ಮಗುವಿನ ಮುಖ ನೋಡಿದ ತಾಯಿ..!

ಆಂಧ್ರಪ್ರದೇಶದ ವಿನೋದ್ ಹಾಗೂ ಶ್ಯಾಮ್ ಸುಂದರ್ ಎಂಬುವವರಿಗೆ ಸುಪಾರಿ ನೀಡಿ ಸಿದ್ಧಾರ್ಥ್ ಹತ್ಯೆ ಮಾಡಿರಬಹುದು ಎಂಬುದು ಪೊಲೀಸರ ಶಂಕೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಇಂದು ವಿಚಾರಣೆ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...