alex Certify ಕೋವಿಡ್ ಕೇರ್ ಸೆಂಟರ್ ನಿಂದ ಸೋಂಕಿತ ಪರಾರಿ: ತಡೆಯಲು ಹೋದ ಸಿಬ್ಬಂದಿಗೆ ಅಪಘಾತದಲ್ಲಿ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಕೇರ್ ಸೆಂಟರ್ ನಿಂದ ಸೋಂಕಿತ ಪರಾರಿ: ತಡೆಯಲು ಹೋದ ಸಿಬ್ಬಂದಿಗೆ ಅಪಘಾತದಲ್ಲಿ ಗಾಯ

ಬೆಂಗಳೂರಿನ ನೆಲಮಂಗಲದ ಮಾದಾವರ ಬಳಿ ಇರುವ ಬಿಐಇಸಿ ಕೋವಿಡ್ ಕೇರ್ ಸೆಂಟರ್ ನಿಂದ ಕೊರೋನಾ ಸೋಂಕಿತ ವ್ಯಕ್ತಿ ಪರಾರಿಯಾಗಿದ್ದಾನೆ.

ಆತ ಕಾರ್ ನಲ್ಲಿ ಪರಾರಿಯಾಗುವ ವೇಳೆ ಮಾರ್ಷಲ್ ಗಳು ತಡೆಯಲು ಯತ್ನಿಸಿದ್ದಾರೆ. ಕಾರ್ ಅಡ್ಡಗಟ್ಟುವ ವೇಳೆಯಲ್ಲಿ ಮಾರ್ಷಲ್ ಗಳು ಇದ್ದ ಕಾರು ಅಪಘಾತಕ್ಕೀಡಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾಗೂ ತಡೆಗೋಡೆಗೆ ಕಾರ್ ಡಿಕ್ಕಿ ಹೊಡೆದು ಜಖಂಗೊಂಡಿದ್ದು ಕಾರ್ ನಲ್ಲಿದ್ದ ನಾಲ್ವರ ಪೈಕಿ ಒಬ್ಬರಿಗೆ ಗಾಯಗಳಾಗಿವೆ. ಕೊರೋನಾ ಸೋಂಕಿತ ಕಾರ್ ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...