alex Certify ತಾಯಿಯ ಕಾಮದಾಸೆಗೆ ಬಲಿಯಾದ ಪುತ್ರ, ತನಿಖೆಯಲ್ಲಿ ಬಯಲಾಯ್ತು ರಹಸ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಯ ಕಾಮದಾಸೆಗೆ ಬಲಿಯಾದ ಪುತ್ರ, ತನಿಖೆಯಲ್ಲಿ ಬಯಲಾಯ್ತು ರಹಸ್ಯ..!

ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ, ಸಹೋದರ ಹಾಗೂ ತಾಯಿಯ ಪ್ರಿಯಕರನನ್ನು ಬಂಧಿಸಲಾಗಿದೆ.

ಹನುಮಂತ ಪಾಟೀಲ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನುಗ್ಗಿಕೇರಿ ಗ್ರಾಮದಲ್ಲಿ ಕೊಲೆ ನಡೆದಿದ್ದು ಮನೆ ಸಮೀಪವೇ ಹತ್ಯೆಯಾಗಿದ್ದ ಹನುಮಂತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮನೆ ಗೋಡೆ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು ತನಿಖೆ ವೇಳೆ ಅಸಲಿಯತ್ತು ಗೊತ್ತಾಗಿದೆ. ಕೊಲೆಯಾದ ಹನುಮಂತ ಪಾಟೀಲನ ತಾಯಿ, ಸಹೋದರ ಹಾಗೂ ತಾಯಿಯ ಪ್ರಿಯಕರ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಿದ್ದಾರೆ. ಮೃತನ ತಾಯಿ ಮತ್ತು ಮಹದೇವ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದ್ದು, ಇದಕ್ಕೆ ಹನುಮಂತ ಪಾಟೀಲ ಅಡ್ಡಿಯಾಗಿದ್ದ.

ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಹನುಮಂತ ಪಾಟೀಲನ ತಂದೆ ವರ್ಷದ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ನಂತರದಲ್ಲಿ ಮಹದೇವನೊಂದಿಗೆ ತಾಯಿ ಅಕ್ರಮ ಸಂಬಂಧ ಬೆಳೆಸಿದ್ದು ಇದೇ ವಿಚಾರಕ್ಕೆ ಹನುಮಂತನೊಂದಿಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಹಿರಿಯರು ಪಂಚಾಯಿತಿ ನಡೆಸಿ ಹನುಮಂತನನ್ನು ಬೇರೆ ಮಾಡಿದ್ದಾರೆ. ಪ್ರತ್ಯೇಕವಾಗಿ ವಾಸವಾಗಿದ್ದ ಹನುಮಂತನೊಂದಿಗೆ ಜಗಳವಾಡಿದ ಆತನ ತಾಯಿ ಮತ್ತು ಪ್ರಿಯಕರ, ಮತ್ತೊಬ್ಬ ಪುತ್ರ ಖಾರದಪುಡಿ ಎರಚಿ ಕೊಲೆ ಮಾಡಿದ್ದಾರೆ. ಈಗ ಗಂಡನ ಅಪಘಾತದ ವಿಷಯದ ಕುರಿತಾಗಿ ಗುಸುಗುಸು ಆರಂಭವಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...