alex Certify ಪೊಲೀಸರ ಕಣ್ತಪ್ಪಿಸಲು ಭರ್ಜರಿ ಪ್ಲಾನ್ ಮಾಡಿದ ಸೈಕಲ್​ ಸವಾರ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ಕಣ್ತಪ್ಪಿಸಲು ಭರ್ಜರಿ ಪ್ಲಾನ್ ಮಾಡಿದ ಸೈಕಲ್​ ಸವಾರ..! ವೈರಲ್​ ಆಯ್ತು ವಿಡಿಯೋ

ರಾಜ್ಯದಲ್ಲಿ ಲಾಕ್​ಡೌನ್​ ಆದೇಶ ಜಾರಿಯಾಗಿರೋದ್ರಿಂದ ಜನ ಸಾಮಾನ್ಯರು ಮನಸ್ಸಿಗೆ ಬಂದಾಗೆಲ್ಲ ಮನೆಯಿಂದ ಹೊರಬರೋಕೆ ಆಗ್ತಿಲ್ಲ. ಪೊಲೀಸರ ಭಯದಿಂದಾಗಿ ಅನೇಕರು ಮನೆಯಲ್ಲೇ ಕುಳಿತುಕೊಂಡರೆ ಇನ್ನೂ ಹಲವರು ಖಾಕಿ ಕಣ್ತಪ್ಪಿಸಿ ಮನೆಯಿಂದ ಹೊರಬರೋಕೆ ಇನ್ನಿಲ್ಲದ ಪ್ಲಾನ್​ ಮಾಡ್ತಿದ್ದಾರೆ.

ಉಡುಪಿ ಜಿಲ್ಲೆಯ ತೆಕ್ಕಟ್ಟೆ ಎಂಬಲ್ಲಿ ಸೈಕಲ್​ ಸವಾರನೊಬ್ಬ ಪೊಲೀಸರ ಲಾಠಿ ಏಟಿಗೆ ಹೆದರಿ ಬೆನ್ನಿಗೆ ತಗಡಿನ ಶೀಟು ಹಾಗೂ ತಲೆಗೆ ಹೆಲ್ಮೆಟ್​ ಹಾಕಿಕೊಂಡು ಹೋಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಸೈಕಲ್​ ಸವಾರನ ಪ್ಲಾನ್​ ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಪೊಲೀಸರು ಅನಗತ್ಯ ಬಲ ಪ್ರಯೋಗ ಮಾಡಬಾರದು: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದಲ್ಲಿ ಲಾಕ್​​ಡೌನ್​ ಜಾರಿ ಬಳಿಕ ಪೊಲೀಸರ ಲಾಠಿ ಚಾರ್ಜ್​ ವಿಚಾರವಾಗಿ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಪೊಲೀಸ್​ ಇಲಾಖೆ ಬಳಿ ಸಂಯಮ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಅನೇಕ ಕಡೆಗಳಲ್ಲಿ ಕೋವಿಡ್​ ಸೋಂಕಿತರ ಮೇಲೆಯೇ ಲಾಠಿ ಪ್ರಹಾರವಾಗಿದ್ದು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಲಾಠಿ ಚಾರ್ಜ್​ಗೆ ಸಂಬಂಧಿಸಿದ ಸಾಕಷ್ಟು ಅಮಾನವೀಯ ವಿಡಿಯೋಗಳು ವೈರಲ್​ ಆದ ಹಿನ್ನೆಲೆಯಲ್ಲಿ ಸ್ವತಃ ಬೆಂಗಳೂರು ನಗರ ಪೊಲೀಸ್​ ಕಮಿಷನರ್​ ಕಮಲ್​ ಪಂತ್​, ಲಾಕ್​ಡೌನ್​ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ. ಇದನ್ನ ಹೊರತುಪಡಿಸಿ ಬಲ ಪ್ರಯೋಗ ಮಾಡಬೇಡಿ ಎಂದು ಟ್ವಿಟರ್​ ಮೂಲಕ ಸೂಚನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...