alex Certify ಕ್ರಿಕೆಟ್ ಟೂರ್ನಿ ಗೆದ್ದವರಿಗೆ ಭರ್ಜರಿ ಬಹುಮಾನ: ನೋಂದಣಿಗೆ ಮುಗಿಬಿದ್ದ ನೂರಾರು ತಂಡ – ಕಂಗಾಲಾಗಿ ಟೂರ್ನಿಯನ್ನೇ ಕ್ಯಾನ್ಸಲ್ ಮಾಡಿದ ಆಯೋಜಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಟೂರ್ನಿ ಗೆದ್ದವರಿಗೆ ಭರ್ಜರಿ ಬಹುಮಾನ: ನೋಂದಣಿಗೆ ಮುಗಿಬಿದ್ದ ನೂರಾರು ತಂಡ – ಕಂಗಾಲಾಗಿ ಟೂರ್ನಿಯನ್ನೇ ಕ್ಯಾನ್ಸಲ್ ಮಾಡಿದ ಆಯೋಜಕರು

ಚಿಕ್ಕಮಗಳೂರು: ಕ್ರಿಕೆಟ್ ಟೂರ್ನಿ ಆಯೋಜಿಸಿದ್ದ ಆಯೋಜಕರು ಪದ್ಯಾವಳಿ ಗೆದ್ದವರಿಗೆ ಘೋಷಣೆ ಮಾಡಿದ್ದ ಭರ್ಜರಿ ಬಹುಮಾನದ ಲಿಸ್ಟ್ ನೋಡಿ ಕ್ರಿಕೆಟ್ ತಂಡಗಳು ನೋಂದಾವಣಿಗೆ ಮುಗಿಬಿದ್ದಿದ್ದು, ಕಂಗಾಲಾದ ಆಯೋಜಕರು ಇದೀಗ ಪಂದ್ಯಾವಳಿಯನ್ನೇ ರದ್ದು ಮಾಡಿರುವ ಘಟನೆ ನಡೆದಿದೆ. ಪಂದ್ಯಾವಳಿ ಗೆದ್ದವರಿಗೆ ಘೋಷಿಸಿದ್ದ ಭರ್ಜರಿ ಬಹುಮಾನಗಳು ಏನಿರಬಹುದು ಎಂದು ನೀವೇ ನೋಡಿ.

ಪತ್ನಿ ಗರ್ಭಿಣಿ ಎಂಬ ಕಾರಣಕ್ಕೆ ಶೋ ನಿಲ್ಲಿಸಿದ ಖ್ಯಾತ ನಟ

ಚಿಕ್ಕಮಗಳೂರಿನ ಕಡಬಗೆರೆಯಲ್ಲಿ ಇಂಥದ್ದೊಂದು ಪ್ರಸಂಗ ನಡೆದಿದೆ. ಕಡಬಗೆರೆಯ ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಪ್ರೇಮಿಗಳು ಫೆಬ್ರವರಿಯಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದರು. ಪಂದ್ಯಾವಳಿ ಗೆದ್ದವರಿಗೆ ಘೋಷಿಸಿದ್ದ ಭಾರೀ ಮೊತ್ತದ ಬಹುಮಾನ ಹೀಗಿದೆ.

* ಮೊದಲ ಬಹುಮಾನವಾಗಿ 30 ಕೆಜಿ ತೂಗುವ ಕುರಿ ಹಾಗೂ 1ಕೇಸ್ ಬಿಯರ್

* ದ್ವಿತೀಯ ಬಹುಮಾನವಾಗಿ 6 ನಾಟಿ ಕೋಳಿ, 1 ಫುಲ್ ಬಾಟಲ್ ದುಬಾರಿ ಮದ್ಯ ಹಾಗೂ 1 ಕೇಸ್ ಬಿಯರ್

* ಪಂದ್ಯದಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ ತಂಪು ಪಾನೀಯ

* ಸರಣಿ ಶ್ರೇಷ್ಠ ಆಟಗಾರನಿಗೆ 5 ಕೆಜಿ ಈರುಳ್ಳಿ

* ಉತ್ತಮ ದಾಂಡಿಗನಿಗೆ 1 ಕೆಜಿ ಖಾರದ ಪುಡಿ

* ಉತ್ತಮ ಬೌಲರ್ ಗೆ 2 ಲೀಟರ್ ಅಡುಗೆ ಎಣ್ಣೆ

BCCI ಅಧ್ಯಕ್ಷ ಸೌರವ್ ಗಂಗೂಲಿಗೆ ಸ್ಟೆಂಟ್ ಅಳವಡಿಕೆ, ಆಸ್ಪತ್ರೆಗೆ ದೀದೀ ಭೇಟಿ

ಬಹುಮಾನದ ಲಿಸ್ಟ್ ನೋಡಿದ ರಾಜ್ಯದ ವಿವಿಧ ಭಾಗದ ಕ್ರಿಕೆಟ್ ತಂಡಗಳ ಕ್ಯಾಪ್ಟನ್ ಗಳು ಆಯೋಜಕರಿಗೆ ಫೋನ್ ಮಾಡಲು ಆರಂಭಿಸಿದ್ದಾರೆ.

ಬಹುಮಾನ ಘೋಷಿಸಿದ ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ತಂಡಗಳು ಕರೆ ಮಾಡಿವೆ. ಇದರಿಂದ ಕಂಗಾಲಾದ ಆಯೋಜಕರು ಕ್ರಿಕೆಟ್ ಪಂದ್ಯಾವಳಿಯನ್ನೇ ರದ್ದು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...