alex Certify 2 ಗಂಟೆ ಹಿನ್ನೀರಲ್ಲಿ ನಿಂತ ಲಾಂಚ್, ಸಮಯಪ್ರಜ್ಞೆಯಿಂದ ಪ್ರಯಾಣಿಕರ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಗಂಟೆ ಹಿನ್ನೀರಲ್ಲಿ ನಿಂತ ಲಾಂಚ್, ಸಮಯಪ್ರಜ್ಞೆಯಿಂದ ಪ್ರಯಾಣಿಕರ ರಕ್ಷಣೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಗಾಳಿಗೆ ಸಿಲುಕಿ 2 ಗಂಟೆ ನಿಂತಿದೆ. ಇದರಿಂದಾಗಿ ಸುಮಾರು 50 ಪ್ರಯಾಣಿಕರು ಆತಂಕಕ್ಕೀಡಾಗಿದ್ದು ಚಾಲಕನ ಸಮಯಪ್ರಜ್ಞೆಯಿಂದ ಎಲ್ಲರನ್ನೂ ರಕ್ಷಿಸಲಾಗಿದೆ.

ಹುಲಿದೇವರಬನದ ಸಮೀಪ ಶರಾವತಿ ಹಿನ್ನೀರಿನಿಂದ ಹೊಸನಗರ ತಾಲೂಕಿನ ಕೆಬಿ ಕ್ರಾಸ್ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹಸಿರುಮಕ್ಕಿ ಲಾಂಚ್ ಗಾಳಿ-ಮಳೆಯಿಂದಾಗಿ ಹಿನ್ನೀರಿನಲ್ಲೇ ಸುಮಾರು ಎರಡು ಗಂಟೆಗಳ ಕಾಲ ನಿಂತಿದೆ.

ತೆಪ್ಪದ ಮೂಲಕ ಲಾಂಚ್ ಬಳಿಗೆ ತೆರಳಿ ಪಿಲ್ಲರ್ ಗೆ ಹಗ್ಗಕಟ್ಟಿ ಸುರಕ್ಷಿತವಾಗಿ ದಡ ತಲುಪಿಸಲಾಗಿದೆ. ಲಾಂಚ್ ಚಾಲಕ ಮತ್ತು ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಹಗ್ಗ ಕಟ್ಟಿಕೊಂಡು ಸುರಕ್ಷಿತವಾಗಿ ಲಾಂಚ್ ಅನ್ನು ದಡಕ್ಕೆ ಮುಟ್ಟಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...