ಲಾಕ್ ಡೌನ್ ಜಾರಿ ಮಾಡಿದ್ದರಿಂದ ಸಂಕಷ್ಟದಲ್ಲಿರುವ ಶ್ರಮಿಕರಿಗೆ ನೆರವಾಗಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ 1610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದೆ.
ಮೊದಲ ಪ್ಯಾಕೇಜ್ನಲ್ಲಿ ವಂಚಿತರಾಗಿರುವ ಅಸಂಘಟಿತ ವಲಯದ ಶ್ರಮಿಕರಿಗೆ ಎರಡನೇ ಪ್ಯಾಕೇಜ್ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಎರಡನೇ ಪ್ಯಾಕೇಜ್ ಗಾಗಿ ಕನಿಷ್ಠ 500 ಕೋಟಿ ರೂಪಾಯಿ ಬೇಕಾಗಬಹುದು ಎಂದು ಹೇಳಲಾಗಿದೆ.
ಈ ಕುರಿತು ಅಗತ್ಯ ಮಾಹಿತಿ ನೀಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಲಾಗಿದೆ. ಎಲ್ಲಾ ಶ್ರಮಿಕ ವರ್ಗದವರಿಗೆ ಅನುಕೂಲವಾಗುವಂತೆ ಎರಡನೇ ಹಂತದ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ. ಅರ್ಚಕರು, ಛಾಯಾಗ್ರಾಹಕರು, ಅಡುಗೆಯವರು, ಹೂವು ಕಟ್ಟುವವರು, ದರ್ಜಿಗಳು, ಮೇದಾರರು, ಟೂರಿಸ್ಟ್ ಗೈಡ್ ಗಳು, ಕುಶಲಕರ್ಮಿಗಳು, ಮರದ ಕೆಲಸ ಮಾಡುವವರು ಸೇರಿದಂತೆ ವಿವಿಧ ವಲಯದವರಿಗೆ ಪ್ಯಾಕೇಜ್ ಕೊಡುಗೆ ನೀಡುವ ಸಾಧ್ಯತೆಯಿದೆ. ಸುಮಾರು 10 ಲಕ್ಷ ಮಂದಿಗೆ ಹೊಸ ಪ್ಯಾಕೇಜ್ ನಲ್ಲಿ ನೆರವು ನೀಡಲಾಗುವುದು ಎಂದು ಹೇಳಲಾಗಿದೆ.