alex Certify ಬೆಂಗಳೂರಲ್ಲಿ ಕೊರೋನಾ ಬಿರುಗಾಳಿ ಎಬ್ಬಿಸಿದ ಬಿಹಾರಿ ಕಾರ್ಮಿಕ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500 ಕ್ಕೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಕೊರೋನಾ ಬಿರುಗಾಳಿ ಎಬ್ಬಿಸಿದ ಬಿಹಾರಿ ಕಾರ್ಮಿಕ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500 ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 500 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 26 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಬೆಂಗಳೂರಿನಲ್ಲಿ 13 ಮಂದಿಗೆ ಸೋಂಕು ತಗುಲಿದೆ. 419 ನೇ ಸೋಂಕಿತ ನಿಂದ ಇಂದು 9 ಜನರಿಗೆ ಸೋಂಕು ತಗುಲಿದೆ. ಬಿಹಾರಿ ಕಾರ್ಮಿಕನಿಂದ ಆರು ವರ್ಷದ ಮಗುವಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಬಿಹಾರಿ ಕಾರ್ಮಿಕರಿಂದ ಸೋಂಕಿಗೆ ಒಳಗಾಗಿರುವ ನಾಲ್ಕು ಮಂದಿ ದ್ವಿತೀಯ ಸಂಪರ್ಕದಲ್ಲಿದ್ದವರು ಎಂದು ಹೇಳಲಾಗಿದೆ.

ಬೆಂಗಳೂರಿನ 13 ಮಂದಿಗೆ ಇಂದು ಸೋಂಕು ತಗುಲಿದ್ದು ಇದರೊಂದಿಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 133 ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 9 ಮಂದಿಗೆ ಸೋಂಕು ತಗುಲಿದೆ. ಬೆಳಗ್ಗೆ 6, ಸಂಜೆ ಮೂವರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 54 ಏರಿಕೆಯಾಗಿದೆ. ಒಬ್ಬನಿಂದ 9 ಜನರಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ರೋಗಿ  128 ರಿಂದ ನಾಲ್ವರು ಮಹಿಳೆಯರು, ಇಬ್ಬರು ಪುರುಷರು, ಎಂಟು ವರ್ಷದ ಬಾಲಕನಿಗೆ ಸೋಂಕು ತಗುಲಿದೆ.

ಬೆಂಗಳೂರಲ್ಲಿ ಸೋಂಕಿತ -419 ಬಿಹಾರಿ ಕಾರ್ಮಿಕನಿಂದ ಇಂದು 9 ಮಂದಿಗೆ ಸೋಂಕು ತಗಲಿದೆ. ಸೋಂಕಿತ -465 ಸಂಪರ್ಕದಿಂದ ಮೂವರಿಗೆ ಸೋಂಕು ತಗುಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...