alex Certify BIG NEWS: ಬೆಂಗಳೂರಿನಿಂದ ತೆರಳಲು ಮುಂದಾಗಿರುವ KSRTC ಬಸ್‌ ಪ್ರಯಾಣಿಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನಿಂದ ತೆರಳಲು ಮುಂದಾಗಿರುವ KSRTC ಬಸ್‌ ಪ್ರಯಾಣಿಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಳೆ ರಾತ್ರಿಯಿಂದ ಒಂದು ವಾರಗಳ ಕಾಲ ಲಾಕ್‌ ಡೌನ್‌ ಮಾಡಲಾಗುತ್ತಿದೆ. ಹೀಗಾಗಿ ಬಹುತೇಕರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಅಂತವರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ.

ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ನಿಗಮದ ವ್ಯಾಪ್ತಿಯಲ್ಲಿನ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಬಸ್ಸುಗಳ ಕಾರ್ಯಾಚರಣೆಯ ಬಗ್ಗೆ ಕೂಲಂಕುಷ ಪರಾಮರ್ಶೆ ನಡೆಸಿದ್ದಾರೆ.

*  ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾಳೆ 1100 ‌‌ಬಸ್ಸುಗಳನ್ನು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿಯಾಗಿ ಕಾರ್ಯಚರಣೆ ಮಾಡಲು ಯೋಜಿಸಲಾಗಿದೆ‌.

* ಇಂದು ರಾತ್ರಿ 8 ಗಂಟೆಯವರೆಗೆ ಈಗಾಗಲೇ ಒಟ್ಟು 1100 ಬಸ್ಸುಗಳನ್ನು ಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದ್ದು, 32000 ಪ್ರಯಾಣಿಕರು ಈವರೆಗೆ ಪ್ರಯಾಣಿಸಿದ್ದಾರೆ.

* ರಾಜ್ಯದ ಪ್ರಮುಖ ಸ್ಥಳಗಳಾದ ಬಳ್ಳಾರಿ, ದಾವಣಗೆರೆ, ಹೊಸದುರ್ಗ, ಯಾದಗಿರಿ, ಹಾಸನ, ಕಲಬುರಗಿ, ಶಿವಮೊಗ್ಗ, ತಿರುಪತಿ, ಅನಂತಪುರ ಹಾಗೂ ಪಾವಗಡಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳು ಸಂಚರಿಸುತ್ತಿವೆ.

* ಇಂದು 231 ಬಸ್ಸುಗಳ ಮುಂಗಡ ಟಿಕೇಟು ಬುಕ್ಕಿಂಗ್ ಆಗಿವೆ.

* ಪ್ರಯಾಣದ ವೇಳೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ.

* ಬೆಂಗಳೂರು ನಗರದಲ್ಲಿ ಒಟ್ಟು 20 ಪಿಕ್‌ ಅಪ್ ಸ್ಥಳಗಳಿಂದ ಬಸ್ಸುಗಳನ್ನು ಕಾರ್ಯಚರಣೆಗೊಳಿಸಲಾಗುತ್ತಿದ್ದು, ಈ ಎಲ್ಲಾ ಸ್ಥಳಗಳಲ್ಲಿಯೂ
ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

*ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಬಸ್ಸುಗಳನ್ನು ನಿಯೋಜಿಸಲು ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಸೂಚಿಸಿದ್ದಾರೆ.

* ಘಟಕಗಳ ವ್ಯಾಪ್ತಿಯಲ್ಲಿರುವ ಚಾಲಕ – ನಿರ್ವಾಹಕರನ್ನು ಮಾತ್ರ ಸೇವೆಗೆ ಉಪಯೋಗಿಸುವಂತೆ ತಿಳಿಸಲಾಗಿದೆ.

* ಬೆಂಗಳೂರು ನಗರದ ಪ್ರಮುಖ ಪಿಕ್‌ ಅಪ್‌ ಪಾಯಿಂಟ್ ಗಳಲ್ಲಿ ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳನ್ನು ಸೂಕ್ತ ಬಸ್ಸುಗಳ ಕಾರ್ಯಚರಣೆಗಾಗಿ
ನಿಯೋಜಿಸಲಾಗಿದ್ದು, ನಾಳೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಸ್ಸುಗಳ ಕಾರ್ಯಾಚರಣೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...