alex Certify BIG NEWS: ನಾಯಕತ್ವ ಬದಲಾವಣೆ ವಿಚಾರ; ದೆಹಲಿಗೆ ಹೋಗಿದ್ದು ನಿಜ; ತನ್ನ ನಡೆ ಸಮರ್ಥಿಸಿಕೊಂಡ ಸಿ.ಪಿ.ಯೋಗೇಶ್ವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಯಕತ್ವ ಬದಲಾವಣೆ ವಿಚಾರ; ದೆಹಲಿಗೆ ಹೋಗಿದ್ದು ನಿಜ; ತನ್ನ ನಡೆ ಸಮರ್ಥಿಸಿಕೊಂಡ ಸಿ.ಪಿ.ಯೋಗೇಶ್ವರ್

ಸಿ. ಪಿ. ಯೋಗೇಶ್ವರ್‌ ಕೊಡಗು ಪ್ರವಾಸ; ಸ್ಪಷ್ಟನೆ ಕೊಟ್ಟಿದ್ದೇಕೆ? | Minister CP Yogeshwar Kodagu Tour Clarification - Kannada Oneindia

ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾಗುತ್ತಿದ್ದಂತೆಯೇ ಸಚಿವ ಸಿ.ಪಿ.ಯೋಗೇಶ್ವರ್ ಹೆಸರು ಕೇಳಿಬಂದಿದ್ದು, ದೆಹಲಿಯಲ್ಲಿ ಬೀಡು ಬಿಟ್ಟು ಸಿಎಂ ಬದಲಾವಣೆ ನಿಟ್ಟಿನಲ್ಲಿ ತೆರೆಮರೆ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಸ್ವತಃ ಸಿ.ಪಿ ಯೋಗೇಶ್ವರ್ ಸ್ಪಷ್ಟನೆ ನೀಡಿದ್ದು, ದೆಹಲಿಗೆ ಹೋಗಿದ್ದು ನಿಜ. ನನ್ನ ನೋವು ಹೇಳಿಕೊಳ್ಳಲು ಹೋಗಿದ್ದೆ ಎಂದಿದ್ದಾರೆ.

ನಗು ತರಿಸುತ್ತೆ ಚಂಡಮಾರುತವಿದ್ದರೂ ಮನೆಯಿಂದ ಆಚೆ ಬಂದವನು ನೀಡಿದ ʼಉತ್ತರʼ

ವಿಧಾನಸೌಧದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ನಾನು ದೆಹಲಿಗೆ ಹೋಗುತ್ತಾ, ಬರುತ್ತಾ ಇರುತ್ತೇನೆ. ನಾಯಕತ್ವ ಬದಲಾವಣೆ ವಿಚಾರ ಯಾಕೆ ಚರ್ಚೆಗೆ ಬಂತು ನನಗೆ ಗೊತ್ತಿಲ್ಲ. ನನಗೆ ನನ್ನದೇ ಆದ ಸಮಸ್ಯೆಗಳಿವೆ. ಮುಂದಿನ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕಿದೆ. ನನ್ನ ವೈಯಕ್ತಿಕ ಕೆಲಸಕ್ಕೆ ನಾನು ದೆಹಲಿಗೆ ಹೋಗಿದ್ದೆ. ಆದರೆ ಯಾವ ವಿಚಾರಕ್ಕೆ ಹೋಗಿದ್ದೆ ಏನು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದಾರೆ.

ಫಾಂಟಾ ಬಾಟಲಿ ಮುಚ್ಚಳ ತೆಗೆಯಲು ಜೇನ್ನೊಣಗಳ ಸಾಹಸ; ವಿಡಿಯೋ ವೈರಲ್

ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಬೇರೆಯವರು ಕೆಲಸ ಮಾಡುವುದು ನನಗೆ ಇಷ್ಟವಾಗಲ್ಲ. ನನ್ನ ಇಲಾಖೆಯಲ್ಲಿ ಬೇರೊಬ್ಬರು ಹಸ್ತಕ್ಷೇಪ ಮಾಡುವುದನ್ನು ಸಹಿಸಲಾಗದು ಇದನ್ನು ಎಲ್ಲರೂ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕು. ಪಕ್ಷದ ಚೌಕಟ್ಟಿನಲ್ಲಿಯೇ ಕೆಲ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ. 2023ರ ಚುನಾವಣೆಯಲ್ಲಿಯೂ ನಮ್ಮ ಬಿಜೆಪಿ ಅಧಿಕಾರಕ್ಕೆ ಬರಬೇಕು ಈ ನಿಟ್ಟಿನಲ್ಲಿ ನಾನು ಕೆಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...