alex Certify BIG BREAKING: ಕೊರೊನಾ ಅಬ್ಬರಕ್ಕೆ ಬೆಚ್ಚಿಬಿದ್ದ ಜನ -‌ ಬೆಳಗಿನ ಬುಲೆಟಿನ್‌ ನಲ್ಲೇ 105 ಪ್ರಕರಣ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಅಬ್ಬರಕ್ಕೆ ಬೆಚ್ಚಿಬಿದ್ದ ಜನ -‌ ಬೆಳಗಿನ ಬುಲೆಟಿನ್‌ ನಲ್ಲೇ 105 ಪ್ರಕರಣ ಪತ್ತೆ

ರಾಜ್ಯದಲ್ಲಿ ಶುಕ್ರವಾರ ಕೊರೊನಾ ವೈರಸ್‌ ಮತ್ತೆ ಆರ್ಭಟ ನಡೆಸಿದ್ದು, ಇಂದು ಬೆಳಗಿನ ಹೆಲ್ತ್‌ ಬುಲೆಟಿನ್‌ ನಲ್ಲಿ 105 ಮಂದಿಗೆ ಕೊರೊನಾ ಸೋಂಕು ಇರುವುದು ಕಂಡು ಬಂದಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತ ಸಂಖ್ಯೆ 1710 ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಇಂದು 51 ಕೊರೊನಾ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ವೈದ್ಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರ ಕ್ಷೇತ್ರ ಎಂಬುದು ಗಮನಾರ್ಹ.

ಇನ್ನುಳಿದಂತೆ ತುಮಕೂರು 7, ಬೆಂಗಳೂರು 5, ಮಂಡ್ಯ 3, ಧಾರವಾಡ 2, ಬಾಗಲಕೋಟೆ 1, ವಿಜಯಪುರ 2, ಹಾವೇರಿ 3, ಬೀದರ್‌ 6, ದಾವಣಗೆರೆ 2, ದಕ್ಷಿಣ ಕನ್ನಡ 1, ಉತ್ತರ ಕನ್ನಡ 1 ಚಿಕ್ಕಮಗಳೂರಿನಲ್ಲಿ 5, ಹಾಸನದಲ್ಲಿ 14, ಚಿತ್ರದುರ್ಗ 1 ಪ್ರಕರಣಗಳು ಕಂಡು ಬಂದಿದ್ದು, ಈ 105 ಸೋಂಕು ಪೀಡಿತರಲ್ಲಿ ಮಹಾರಾಷ್ಟ್ರದಿಂದ ಮರಳಿ ಬಂದವರೇ 83 ಮಂದಿ ಇದ್ದಾರೆ. ಹೀಗಾಗಿ ಲಾಕ್‌ ಡೌನ್‌ ಸಡಿಲಿಕೆ ರಾಜ್ಯಕ್ಕೆ ದುಬಾರಿಯಾಗಿ ಪರಿಣಮಿಸಲಿದೆಯಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...