alex Certify Watch |ಪಾಕಿಸ್ತಾನದಲ್ಲಾಗುತ್ತಿರುವ ಹತ್ಯೆಗಳಲ್ಲಿ ಭಾರತದ ಪಾತ್ರವೆಂದ ಪಾಕ್ ISPR ಡಿಜಿ; ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗಿದೆ ಈ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch |ಪಾಕಿಸ್ತಾನದಲ್ಲಾಗುತ್ತಿರುವ ಹತ್ಯೆಗಳಲ್ಲಿ ಭಾರತದ ಪಾತ್ರವೆಂದ ಪಾಕ್ ISPR ಡಿಜಿ; ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗಿದೆ ಈ ಹೇಳಿಕೆ

ನೆರೆರಾಷ್ಟ್ರ ಪಾಕಿಸ್ತಾನ, ಭಾರತದ ಮೇಲೆ ಮತ್ತೆ ಗೂಬೆ ಕೂರಿಸುವ ಹೇಳಿಕೆ ನೀಡಿದೆ. ಪಾಕಿಸ್ತಾನದಲ್ಲಿ ಆಗುತ್ತಿರುವ ಹತ್ಯೆಗಳಲ್ಲಿ ಭಾರತದ ಪಾತ್ರವಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ನ ಮಹಾನಿರ್ದೇಶಕ ಮೇಜರ್ ಜನರಲ್ ಅಹ್ಮದ್ ಷರೀಫ್ ಚೌಧರಿ ಆರೋಪಿಸಿದ್ದಾರೆ. ಈ ರೀತಿಯ ಪ್ರತಿಪಾದನೆಯ ನಂತರ ಪಾಕಿಸ್ತಾನ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದೆ.

ಮೇಜರ್ ಜನರಲ್ ಚೌಧರಿ, ತನ್ನ ಗಡಿಯೊಳಗೆ ವಿವಿಧ ವ್ಯಕ್ತಿಗಳ ಉದ್ದೇಶಿತ ಹತ್ಯೆಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆ ಬಗ್ಗೆ ನಿರಾಕರಿಸಲಾಗದ ಸಾಕಷ್ಟು ಪುರಾವೆಗಳನ್ನು ಪಾಕಿಸ್ತಾನವು ಹೊಂದಿದೆ ಎಂದು ಆಪಾದಿಸಿದ್ದಾರೆ.

“ಭಾರತದ ಹತ್ಯಾಕಾಂಡವು ಈಗ ವಿವಿಧ ದೇಶಗಳಿಗೆ ಹರಡಿದೆ. ಬೇರೊಂದು ದೇಶದಲ್ಲಿ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಿಂದ ಭಾರತವು ಪಾಕಿಸ್ತಾನದಲ್ಲಿ ವ್ಯಕ್ತಿಗಳ ಹತ್ಯೆಗಳಲ್ಲಿ ತೊಡಗಿದೆ ಎಂದು ರಾವಲ್ಪಿಂಡಿಯ ಜನರಲ್ ಹೆಡ್ ಕ್ವಾರ್ಟರ್ಸ್ ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಚೌಧರಿ ಹೇಳಿದರು.

ಗಡಿ ಆಕ್ರಮಣ ಮತ್ತು ಪಾಕಿಸ್ತಾನ ವಿರೋಧಿ ಚುನಾವಣಾ ನಿರೂಪಣೆಯನ್ನು ರೂಪಿಸುವ ಮೂಲಕ ತನ್ನ ಆಂತರಿಕ ಸವಾಲುಗಳಿಂದ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುವ ಭಾರತದ ತಂತ್ರಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ ಎಂದು ಆಪಾದಿಸಿದರು.

2024 ರಲ್ಲಿ ಭಾರತದಿಂದ ಕನಿಷ್ಠ 120 ಊಹಾಪೋಹ, 15 ವಾಯುಪ್ರದೇಶ ಮತ್ತು 59 ತಾಂತ್ರಿಕ ಉಲ್ಲಂಘನೆಗಳು ನಡೆದಿವೆ ಎಂದರು. “ಪ್ರಸ್ತುತ ಲೋಕಸಭಾ ಚುನಾವಣೆಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಅಭಿಪ್ರಾಯವನ್ನು ಹತ್ತಿಕ್ಕುವ ಭಾರತದ ಯೋಜನೆಯು ಸ್ಪಷ್ಟವಾಗಿದೆ. ಐದು ಪ್ರತ್ಯೇಕ ದಿನಗಳಲ್ಲಿ ಐದು ಸ್ಥಾನಗಳ ಚುನಾವಣೆಗಳು ಕಾಶ್ಮೀರಿಗಳ ಧ್ವನಿಯನ್ನು ಹತ್ತಿಕ್ಕುವ ಮತ್ತು ಚುನಾವಣಾ ಫಲಿತಾಂಶವನ್ನು ಕುಶಲತೆಯಿಂದ ನಿರ್ವಹಿಸುವ ಗುರಿಯನ್ನು ಹೊಂದಿವೆ” ಎಂದರು.

ಭಾರತದ ವಿರುದ್ಧ ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ನ ಮಹಾನಿರ್ದೇಶಕರ ಆರೋಪಗಳು, ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಾಕಷ್ಟು ಅನುಮಾನ ಮತ್ತು ಅಪಹಾಸ್ಯಕ್ಕೆ ಒಳಗಾಗಿವೆ. ಅನೇಕರು ಪಾಕಿಸ್ತಾನದ ಹಕ್ಕುಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾ, ಉಭಯ ದೇಶಗಳ ನಡುವಿನ ಹದಗೆಟ್ಟ ಸಂಬಂಧಗಳು ಮತ್ತು ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಪಾಕಿಸ್ತಾನದ ಇತಿಹಾಸವನ್ನು ಪರಿಗಣಿಸಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...