alex Certify ಮದ್ಯದ ಅಮಲಲ್ಲಿ ಹಾವಿಗೆ ಹಿಂಸೆ ನೀಡಿ ಕಚ್ಚಿ ಕೊಂದ ಕಿಡಿಗೇಡಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಲ್ಲಿ ಹಾವಿಗೆ ಹಿಂಸೆ ನೀಡಿ ಕಚ್ಚಿ ಕೊಂದ ಕಿಡಿಗೇಡಿ ಅರೆಸ್ಟ್

ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ಹಾವನ್ನು ಹಿಂಸಿಸಿ ಕಚ್ಚಿ ಕೊಂದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಕುಮಾರ್ ಬಂಧಿತ ಆರೋಪಿ. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ದೋಬಿ ಕೆಲಸ ಮಾಡಿಕೊಂಡಿರುವ ಕುಮಾರ್ ಮದ್ಯದ ನಶೆಯಲ್ಲಿ ರಸ್ತೆಗೆ ಅಡ್ಡ ಬಂದ ಹಾವನ್ನು ಕೈಯಲ್ಲಿ ಹಿಡಿದು ಹಿಂಸಿಸಿ ಬಾಯಲ್ಲಿ ಕಚ್ಚಿ ಕೊಂದು ಹಾಕಿದ್ದಾನೆ. ಅದರ ಚರ್ಮ ಸುಲಿದು ವಿಕೃತವಾಗಿ ವರ್ತಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...