alex Certify ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ, ಪ್ರಿಯಕರನೊಂದಿಗೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ, ಪ್ರಿಯಕರನೊಂದಿಗೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ

ಬೆಂಗಳೂರು: ಪತ್ನಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಸುಪಾರಿ ನೀಡಿ ಪತ್ನಿ ಕೊಲೆ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸದ್ದುಗುಂಟೆಪಾಳ್ಯ ಪೊಲೀಸರು ಮೃತನ ಪತ್ನಿ, ಆಕೆಯ ಪ್ರಿಯಕರ ಸೇರಿದಂತೆ 9 ಆರೋಪಿಗಳನ್ನು ಬಂಧಿಸಿದ್ದಾರೆ. ತಿಲಕ್ ನಗರ ನಿವಾಸಿ ತಸ್ಲಿಂಬಾನು, ಆಕೆಯ ಪ್ರಿಯಕರ ಅಪ್ಸರ್ ಖಾನ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

ಮಾರ್ಚ್ 19 ರಂದು ಸಂಜೆ 6.30 ಕ್ಕೆ ನ್ಯೂಗುರಪ್ಪನ ಪಾಳ್ಯ ಟಿಂಬರ್ ಗಲ್ಲಿಯ ಸರ್ಕಲ್ ನಲ್ಲಿ ಮಹಮ್ಮದ್ ಶಫಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಹಳೆ ಕಾರು ಮಾರಾಟ ಮಾಡುವ ಬ್ರೋಕರ್ ಆಗಿದ್ದ ಶಫಿ ಮತ್ತು ತಸ್ಲೀಂಬಾನು ತಿಲಕ್ ನಗರದಲ್ಲಿ ವಾಸವಾಗಿದ್ದರು.

ಗುರಪ್ಪನಪಾಳ್ಯದಲ್ಲಿ ಅಪ್ಸರ್ ಖಾನ್ ಗ್ಲಾಸ್ ಅಂಡ್ ಪ್ಲೇವುಡ್ ಅಂಗಡಿ ನಡೆಸುತ್ತಿದ್ದ. ಮದುವೆಯೊಂದರಲ್ಲಿ ಆತನಿಗೆ ತಸ್ಲೀಂ ಬಾನು ಪರಿಚಯವಾಗಿ ಅಕ್ರಮ ಸಂಬಂಧ ಬೆಳೆಸಿದ್ದ. ತಮ್ಮ ಸಂಬಂಧಕ್ಕೆ ಪತಿ ಶಫಿ ಅಡ್ಡಿಯಾಗಿದ್ದಾನೆ ಎಂದು ತಿಳಿದ ತಸ್ಲೀಂಬಾನು ಪ್ರಿಯಕರ ಅಪ್ಸರ್ ಜೊತೆಗೆ ಸೇರಿ ಗಂಡನ ಹತ್ಯೆಗೆ ಸಂಚು ರೂಪಿಸಿದ್ದಾಳೆ.

ಅಪ್ಸರ್ ಖಾನ್ 75 ಲಕ್ಷ ರೂ. ನೀಡಿ ರಿಯಲ್ ಎಸ್ಟೇಟ್ ನಲ್ಲಿ ಶಫಿ ಮೂಲಕ ಹೂಡಿಕೆ ಮಾಡಿಸಿದ್ದ. 5 ಲಕ್ಷ ಕಮಿಷನ್ ಕೊಡುವುದಾಗಿ ಹೇಳಿದ್ದ. ಆತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದ. ಶಫಿ ಕೊಲೆಮಾಡಲು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ತಬ್ರೇಜ್, ವಸೀಂ ಎಂಬುವವರಿಗೆ 2 ಲಕ್ಷ ರೂ. ಸುಪಾರಿ ನೀಡಿದ್ದು, ಅವರಿಬ್ಬರು ಸಹಚರರೊಂದಿಗೆ ಸೇರಿ ಶಫಿಯನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಕೊಲೆ ಪ್ರಕರಣ ಬಯಲಿಗೆಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...