alex Certify ಹೈಕೋರ್ಟ್, ಸುಪ್ರೀಂ ಕೋರ್ಟ್ ಗಳು ರಾಜ್ಯದ ಜನರ ಪರ ನಿಂತು ಮಾತನಾಡುವ ಸ್ಥಿತಿ ಬಂದಿದೆ; 25 ಬಿಜೆಪಿ ಸಂಸದರು ಎಲ್ಲಿ ಕಡಿದು ಗುಡ್ಡೆ ಹಾಕುತ್ತಿದ್ದೀರಿ…?; ಕಾಂಗ್ರೆಸ್ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಕೋರ್ಟ್, ಸುಪ್ರೀಂ ಕೋರ್ಟ್ ಗಳು ರಾಜ್ಯದ ಜನರ ಪರ ನಿಂತು ಮಾತನಾಡುವ ಸ್ಥಿತಿ ಬಂದಿದೆ; 25 ಬಿಜೆಪಿ ಸಂಸದರು ಎಲ್ಲಿ ಕಡಿದು ಗುಡ್ಡೆ ಹಾಕುತ್ತಿದ್ದೀರಿ…?; ಕಾಂಗ್ರೆಸ್ ಕಿಡಿ

ಪಕ್ಷ ಸಂಘಟನೆ: ಕಾಂಗ್ರೆಸ್ ನಾಯಕರ ಚರ್ಚೆ | Prajavani

ಬೆಂಗಳೂರು: ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ನಿರಾಕರಿಸಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರ‍ಿಂ ಕೋರ್ಟ್ ಬಿಸಿ ಮುಟ್ಟಿಸಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 25 ಸಂಸದರು ಏನು ಮಾಡುತ್ತಿದ್ದೀರಿ ರಾಜೀನಾಮೆ ಕೊಟ್ಟು ತೊಲಗಿ ಎಂದು ಆಗ್ರಹಿಸಿದೆ.

ರಾಜ್ಯದ ಜನತೆಯ ಜವಾಬ್ದಾರಿ ಇದ್ದಿದ್ದು – 25 ಸಂಸದರಿಗೆ ಜನತೆಯ ರಕ್ಷಣೆಯ ಹೊಣೆ ಇದ್ದಿದ್ದು – ರಾಜ್ಯ ಬಿಜೆಪಿ ಸರ್ಕಾರಕ್ಕೆ, ಕರ್ನಾಟಕದ ಮೇಲೆ ಆಕ್ಸಿಜನ್ ಯುದ್ಧ ಸಾರಿದ್ದ ಮೋದಿ ಸರ್ಕಾರದ ಯಾರೊಬ್ಬರೂ ಮಾತಾಡದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳು ನೆರವಿಗೆ ನಿಂತು, ಜನರ ಪರವಾಗಿ ಮಾತನಾಡುವ ಸ್ಥಿತಿ ಬಂದಿದ್ದು ಬಿಜೆಪಿ ಆಡಳಿತದ ಅಧೋಗತಿಗೆ ಸಾಕ್ಷಿ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.

ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ತಿದೆ ಹೊಸ ಸಮಸ್ಯೆ: ಈ ಲಕ್ಷಣವಿದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ

ಮೋದಿ ಸರ್ಕಾರದ ಅನ್ಯಾಯದಿಂದ ರಾಜ್ಯದ ಜನತೆಯ ರಕ್ಷಣೆಗೆ ಹೈಕೋರ್ಟ್ ಬರಬೇಕಾಯ್ತು, ಸುಪ್ರೀಂ ಕೋರ್ಟ್ ಜೊತೆ ನಿಲ್ಲಬೇಕಾಯ್ತು. ನೆರೆ ಪರಿಹಾರದಿಂದ ಆಕ್ಸಿಜನ್‌ವರೆಗೂ ರಾಜ್ಯದ ಪರ ನಿಲ್ಲದ 25 ಸಂಸದರು ಅನಗತ್ಯ. ರಾಜೀನಾಮೆ ಕೊಟ್ಟು ಯಾವುದಾದರೂ ನೀರಿಲ್ಲದ ಬಾವಿ ನೋಡಿಕೊಳ್ಳಲಿ ಎಂದಿದೆ.

ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಗುಡುಗಿರುವ ಕಾಂಗ್ರೆಸ್, ಎಲ್ಲಿದ್ಯಪ್ಪಾ.. ತೇಜಸ್ವಿ ಸೂರ್ಯ ಎಲ್ಲಿ ರೋಷ, ಆವೇಶ, ಆಕ್ರೋಶ, ಜನಪರ ಕಾಳಜಿ ಎಲ್ಲವೂ ಎಲ್ಲಿ ಹೋದವು? ಆಕ್ಸಿಜನ್ ನೀಡುವುದಿಲ್ಲವೆಂದು ಕರ್ನಾಟದ ವಿರುದ್ಧ ಸಮರ ಸಾರಿದ ಮೋದಿಯವರ ಬಗ್ಗೆ ಏಕೆ ತುಟಿ ಬಿಚ್ಚಲಿಲ್ಲ? ರಾಜ್ಯದ ಜನರ ಕಾಳಜಿ ವಹಿಸಲು ಕೋರ್ಟುಗಳೇ ಬರಬೇಕಾಯ್ತು, 25 ಸಂಸದರು ಎಲ್ಲಿ ಕಡಿದು ಗುಡ್ಡೆ ಹಾಕುತ್ತಿದ್ದಿರಿ? ಎಂದು ಪ್ರಶ್ನಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...